ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ: ರೈತರ ಸಾಲ ಮನ್ನಾ ಮಾಡಲು ದೇಶಪಾಂಡೆ ಆಗ್ರಹ

Published 19 ಸೆಪ್ಟೆಂಬರ್ 2023, 13:52 IST
Last Updated 19 ಸೆಪ್ಟೆಂಬರ್ 2023, 13:52 IST
ಅಕ್ಷರ ಗಾತ್ರ

ಹಳಿಯಾಳ: ದಾಂಡೇಲಿ ಹಾಗೂ ಜೊಯಿಡಾ ತಾಲ್ಲೂಕನ್ನು ತೀವ್ರ ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿ ಆಗ್ರಹಿಸಿದ್ದೇನೆ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಬರಗಾಲ ಘೋಷಣೆ ಮಾಡಲು ಮಲತಾಯಿ ಧೋರಣೆಯನ್ನು ಅನುಸರಿಸಬಾರದು. ಇಂದು ಕೃಷಿಕರು, ಕಾರ್ಮಿಕರು ಮತ್ತಿತರ ವರ್ಗದ ಜನರು ಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಬರಗಾಲ ಕಾಮಗಾರಿ ತೆಗೆದುಕೊಳ್ಳಬೇಕು. ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳು ಹಾಗೂ ಕೃಷಿಕರಿಗೆ ಸಂಬಂಧಿಸಿದ ಬ್ಯಾಂಕುಗಳು ಕ್ರಿಯಾಶೀಲರಾಗಿ ರೈತರ ಸಾಲ ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದೇನೆ’ ಎಂದರು.

‘ಹಳಿಯಾಳ ತಾಲ್ಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ತಾವು ಸ್ವಚ್ಛತೆಗೆ ಬಹಳಷ್ಟು ಪ್ರಾಧ್ಯಾನ್ಯತೆ ನೀಡಿ ಸ್ವಚ್ಛತೆಯ ಆಂದೋಲನವನ್ನು ಸಹ ಮಾಡಿರುತ್ತೇನೆ. ಸೆ.25 ರಿಂದ ಅ.2ರ ವರೆಗೆ ಹಾಗೂ ಮುಂದೆಯೂ ಕೂಡ ನಿರಂತರ ಸ್ವಚ್ಛತಾ ಆಂದೋಲನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಸೆ.20ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ’ ಎಂದರು.

ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 83 ಫಲಾನುಭವಿಗಳಿಗೆ ಆಶ್ರಯ ಮನೆಗಳ ಮಂಜೂರಾತಿಯಾಗಿ ಕಾಮಗಾರಿ ಆದೇಶ ಹಾಗೂ ರಾಜೀವಗಾಂಧಿ ವಸತಿ ನಿಗಮದಲ್ಲಿ ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಬ್ಲಾಕ್ ಆದ ಮನೆಗಳನ್ನು ಪುನಃ ಪರಿಶೀಲಿಸಿ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿ ಮನೆ ಮಂಜೂರಾತಿಯಾಗಿದೆ. ಜೊಯಿಡಾ ತಾಲ್ಲೂಕಿನ ಕ್ಯಾಸಲರಾಕ್ ನ ಕಲಂಬುಲಿ ಗ್ರಾಮದಲ್ಲಿ 20 ಆಶ್ರಯ ಮನೆಗಳು ಮಂಜೂರಾಗಿದೆ ಹಾಗೂ ಹಳಿಯಾಳಕ್ಕೆ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ150 ಮನೆಗಳು ಮತ್ತು ಡಾ. ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 100 ಮನೆಗಳಿಗಾಗಿ ಮತ್ತು ದಾಂಡೇಲಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 150 ಮನೆಗಳು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 50 ಮನೆಗಳಿಗಾಗಿ ಮಂಜೂರಾತಿ ವಿನಂತಿಸಿದ್ದೇನೆ. ಜೊಯಿಡಾ ಮಿನಿ ವಿಧಾನಸೌಧ ಕಾಮಗಾರಿಗಾಗಿ ₹1 .50ಕೋಟಿ ಮಂಜೂರಾಗಿದೆ’ ಎಂದರು.

‘ನಾಗರಿಕ ವಿಮಾನಯಾನ ಸೇವೆಯಾಗಲಿ’
‘ಕಾರವಾರ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣವಾಗುತ್ತಿದೆ. ಈ ಹಿಂದೆ ಸಿಬರ್ಡ್ ಪ್ರಾಜೆಕ್ಟ್ ಹಾಗೂ ವಿಮಾನ ನಿಲ್ದಾಣ ಪ್ರಾಜೆಕ್ಟ್ ಆಗುವಾಗ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಈಗ ನಿರ್ಮಿಸಲಾಗುತ್ತಿರುವ ಅಲಗೇರಿ ನಾಗರಿಕ ವಿಮಾನ ನಿಲ್ದಾಣ 1986ರಲ್ಲಿ ಅಂತಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ರವರು ಬಹಳ ಉತ್ಸುಕರಾಗಿದ್ದರು. ಎರಡನೇ ಹಂತದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿತ್ತು. ಈ ವಿಮಾನ ನಿಲ್ದಾಣ ಕೇವಲ ನಾಗರಿಕ ಸೇವೆ ಸಿಬರ್ಡ್ ರವರಿಗೆ ಮಾತ್ರ ಸೀಮಿತವಾಗದೆ ನಾಗರಿಕ ವಿಮಾನಯಾನ ಸೇವೆಯಾಗಬೇಕು. ಇದರಿಂದ ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮವು ಸಹ ಆಗುತ್ತದೆ. ಮೀನುಗಾರಿಕೆ ತೋಟಗಾರಿಕೆ ಬೆಳೆ ರಫ್ತು ಮಾಡಲು ಸಹಾಯಕವಾಗಬಹುದು.  ಈ ಬಗ್ಗೆ ಪಕ್ಷಾತೀತವಾಗಿ ಕಾರ್ಯವನ್ನು ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT