ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ನಗರಸಭೆ ಆಯುಕ್ತಎಸ್.ಎಸ್.ಯೋಗೀಶ್ವರ್, ‘ಮಳೆ ಬಂದಾಗ ಬೆಟ್ಟದ ನೀರು ಹರಿದು ಹೋಗಲು ಸಣ್ಣ ಕಾಲುವೆ ನಿರ್ಮಾಣ ಮಾಡಲಾಗಿದೆ. ಅದು ತ್ಯಾಜ್ಯ ವಿಲೇವಾರಿ ಘಟಕದ ಮೂಲಕ ಬರುತ್ತದೆ. ಆದರೆ,ಘಟಕದ ದ್ರವ ತ್ಯಾಜ್ಯ ಹರಿದುಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅದು ಪ್ರತ್ಯೇಕ ಹೊಂಡವೊಂದಕ್ಕೆ ಹರಿಯುತ್ತದೆ. ಅದು ಮಳೆ ನೀರಿನೊಂದಿಗೆ ಮಿಶ್ರಣವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.