ರಾಜೀವಗಾಂಧಿ ಸಬ್ಮಿಷನ್ ಯೋಜನೆಯಡಿ ₹ 3.45 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಬದನಗೋಡ ಪಂಚಾಯ್ತಿ ವ್ಯಾಪ್ತಿಯ ದಾಸನಕೊಪ್ಪ, ಬೆಳ್ಳನಕೇರಿ, ಕುಪಗಡ್ಡೆ, ರಂಗಾಪುರ, ಕಾಳಂಗಿ, ವದ್ದಲ, ದನಗನಹಳ್ಳಿ ಹಾಗೂ ಸಂತೊಳ್ಳಿ ಗ್ರಾಮಗಳ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 2014ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿತು. ಧರ್ಮಾ ಜಲಾಶಯದಿಂದ ಪ್ರತಿದಿನ 5.8 ಲಕ್ಷ ಲೀಟರ್ ನೀರನ್ನು ಎತ್ತಿ, ಸುಮಾರು 14ಸಾವಿರ ಜನರಿಗೆ ಪೂರೈಕೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು.