‘ಭತ್ತ, ಗೋವಿನ ಜೋಳ, ಶುಂಠಿ, ತರಕಾರಿ ಬೆಳೆ ಹಾಳಾಗಿದ್ದು ಎಲ್ಲ ಬೆಳೆಗೂ ಪರಿಹಾರ ನೀಡಬೇಕು. ಹಾಲು ಖರೀದಿ ದರ ಏರಿಸುವ ಜತೆಗೆ ಪಶು ಆಹಾರ ದರ ಕಡಿಮೆ ಮಾಡಬೇಕು. ಕೃಷಿ ಜಮೀನನ್ನು ನಿರುಪಯುಕ್ತ ಎಂದು ಪರಿಗಣಿಸಿ ಮಾರಾಟಕ್ಜೆ ಆಸ್ಪದ ನೀಡುತ್ತಿರುವುದನ್ನು ತಡೆಯಬೇಕು’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಹೇಳಿದರು.