‘ಪಟ್ಟಣದಿಂದ ಒಂದೇ ಕಿಲೊ ಮೀಟರ್ ದೂರವಿರುವುದರಿಂದ ಕೆಲವರು ನಿತ್ಯ ಇಲ್ಲಿ ಬಂದು ಮದ್ಯಪಾನ ಮಾಡುತ್ತಿದ್ದಾರೆ. ಇಲ್ಲಿ ಕಸ ತಂದು ಹಾಕುವುದು ಮುಂದುವರಿದಿದೆ. ತಾಲ್ಲೂಕಿನ ಮೂರೂರು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯಡೆ ಕಾರ್ಯಕ್ರಮದಲ್ಲಿ ಈ ಜಾಗ ರಕ್ಷಿಸುವ ಬಗ್ಗೆ ನಿರ್ಣಯ ಕೈಕೊಳ್ಳಲಾಗಿತ್ತು. ಹಂತ ಹಂತವಾಗಿ ಜಾಗಕ್ಕೆ ಬೇಲಿ ಹಾಕಿ ರಕ್ಷಿಸುವ ಕಾರ್ಯ ಮುಂದುವರಿಸಲಾಗಿದೆ’ ಎಂದು ಕುಮಟಾ ಆರ್.ಎಫ್.ಒ ಎಸ್.ಟಿ.ಪಟಗಾರ ಹೇಳಿದರು.