‘ಪ್ರಸ್ತುತ ಉದ್ಯಾನದ ಜಾಗದ ಸದ್ಬಳಕೆ ಉದ್ದೇಶದಿಂದ ಒಂದು ಪಾರ್ಶ್ವದಲ್ಲಿ ಅರಣ್ಯ ಇಲಾಖೆಯಿಂದ ವಸತಿಗೃಹಗಳ ನಿರ್ಮಾಣ ಕಾರ್ಯ ನಡೆದಿದೆ. ಈಗಾಗಲೇ ಒಣಗಿದ ಗಿಡಗಳು, ಮುರಿದ ಕಬ್ಬಿಣದ ಮಕ್ಕಳ ಆಟಿಕೆಗಳು, ಶಿಥಿಲಗೊಂಡಿರುವ ಕುಟೀರಗಳನ್ನು ತೆರವು ಮಾಡಲಾಗಿದೆ. ಐದು ಎಕರೆಗೂ ಹೆಚ್ಚು ವಿಸ್ತಾರದ ಜಾಗದಲ್ಲಿ ಒಂದು ಕಡೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ಬಳಕೆಯಿಲ್ಲದೆ ಇದ್ದ ಜಾಗವನ್ನು ಬಳಸಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ' ಎಂಬುದು ಅರಣ್ಯ ಅಧಿಕಾರಿಗಳ ಮಾತಾಗಿದೆ.