ಗೌರೇಶ ಸಂತೋಷ ಬಾಂದೇಕರ್ ಮತ್ತು ಪ್ರೇಮಕುಮಾರ್ ಎನ್.ಸೋಲಂಕಿ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಆರೋಪಿಗಳು ಕಾಕರಮಠದ ನಿವಾಸಿ ವಿಶಾಲ ನಾರ್ವೇಕರ್ ಅವರ ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. 2019ರ ನ.8ರಿಂದ 2020ರ ಜುಲೈ 6ರ ಅವಧಿಯಲ್ಲಿ ಹಂತಹಂತವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದರು. ಆದರೆ, ಉದ್ಯೋಗ ಕೊಡಿಸಿರಲಿಲ್ಲ.