<p><strong>ಅಂಕೋಲಾ:</strong> ‘ಗಾಂಧಿ ಹತ್ಯೆ ಮಾಡಿದ ಗೋಡ್ಸೆಗೆ ಇಂದು ದೇವಸ್ಥಾನ ಕಟ್ಟಿ ಪೂಜಿಸುವ ಮಟ್ಟಕ್ಕೆ ಬಂದಿದ್ದೇವೆ. ದೇಶ ಹೇಗೆ ಅಧಪತನದತ್ತ ಸಾಗುತ್ತಿದೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹೇಳಿದರು.</p>.<p>ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಶುಕ್ರವಾರ ಹುತಾತ್ಮರ ದಿನವನ್ನು ಸೌಹಾರ್ದ ಸಂಕಲ್ಪ ದಿನವಾಗಿ ಆಚರಿಸಿದ ನಿಮಿತ್ತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.</p>.<p>ಸಾಹಿತಿ ಮೋಹನ ಹಬ್ಬು ಮಾತನಾಡಿ, ಗಾಂಧೀಜಿ ಅವರ ಹೆಸರನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ. ಗಾಂಧೀಜಿ ಅವರ ತತ್ವ ವಿಚಾರಗಳನ್ನು ಅರಿಯದೇ ಯಾರೋ ಹೇಳಿದ ಮಾತ್ರಕ್ಕೆ ಯುವ ಜನತೆ ಕೂಡ ಬಲಿಯಾಗುತ್ತಿರುವುದು ಆಘಾತಕಾರಿ ಎಂದರು.</p>.<p>ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿದರು.</p>.<p>ಕವಿ ಕೃಷ್ಣಾ ನಾಯಕ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹೋರಾಟಗಾರ್ತಿ ಯಮುನಾ ಗಾಂವಕರ ಮಾತನಾಡಿದರು. ಸಾಹಿತಿ ಡಾ.ಆರ್.ಜಿ.ಗುಂದಿ, ಜೆ.ಪ್ರೇಮಾನಂದ, ಗೌರೀಶ ನಾಯಕ, ಜಗದೀಶ ನಾಯಕ, ಸಂತೋಷ ನಾಯ್ಕ, ಉದಯ ನಾಯ್ಕ, ಗೀತಾ ಗೌಡ , ಪೂರ್ಣಿಮಾ ನಾಯ್ಕ, ವಿನೋದ ನಾಯ್ಕ, ಎಚ್.ಬಿ.ನಾಯಕ, ರಾಜಗೋಪಾಲ್ ಶೇಟ್ ಇದ್ದರು.</p>
<p><strong>ಅಂಕೋಲಾ:</strong> ‘ಗಾಂಧಿ ಹತ್ಯೆ ಮಾಡಿದ ಗೋಡ್ಸೆಗೆ ಇಂದು ದೇವಸ್ಥಾನ ಕಟ್ಟಿ ಪೂಜಿಸುವ ಮಟ್ಟಕ್ಕೆ ಬಂದಿದ್ದೇವೆ. ದೇಶ ಹೇಗೆ ಅಧಪತನದತ್ತ ಸಾಗುತ್ತಿದೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹೇಳಿದರು.</p>.<p>ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಶುಕ್ರವಾರ ಹುತಾತ್ಮರ ದಿನವನ್ನು ಸೌಹಾರ್ದ ಸಂಕಲ್ಪ ದಿನವಾಗಿ ಆಚರಿಸಿದ ನಿಮಿತ್ತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.</p>.<p>ಸಾಹಿತಿ ಮೋಹನ ಹಬ್ಬು ಮಾತನಾಡಿ, ಗಾಂಧೀಜಿ ಅವರ ಹೆಸರನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ. ಗಾಂಧೀಜಿ ಅವರ ತತ್ವ ವಿಚಾರಗಳನ್ನು ಅರಿಯದೇ ಯಾರೋ ಹೇಳಿದ ಮಾತ್ರಕ್ಕೆ ಯುವ ಜನತೆ ಕೂಡ ಬಲಿಯಾಗುತ್ತಿರುವುದು ಆಘಾತಕಾರಿ ಎಂದರು.</p>.<p>ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿದರು.</p>.<p>ಕವಿ ಕೃಷ್ಣಾ ನಾಯಕ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹೋರಾಟಗಾರ್ತಿ ಯಮುನಾ ಗಾಂವಕರ ಮಾತನಾಡಿದರು. ಸಾಹಿತಿ ಡಾ.ಆರ್.ಜಿ.ಗುಂದಿ, ಜೆ.ಪ್ರೇಮಾನಂದ, ಗೌರೀಶ ನಾಯಕ, ಜಗದೀಶ ನಾಯಕ, ಸಂತೋಷ ನಾಯ್ಕ, ಉದಯ ನಾಯ್ಕ, ಗೀತಾ ಗೌಡ , ಪೂರ್ಣಿಮಾ ನಾಯ್ಕ, ವಿನೋದ ನಾಯ್ಕ, ಎಚ್.ಬಿ.ನಾಯಕ, ರಾಜಗೋಪಾಲ್ ಶೇಟ್ ಇದ್ದರು.</p>