ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು, ಅಲ್ಲದೆ ಪತ್ನಿ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಚುನಾವಣೆ ಸಂದರ್ಭದಲ್ಲಿ ಮುದ್ರಿಸಿದ್ದ ಕರಪತ್ರಗಳನ್ನು ಮನೆಯಲ್ಲಿ ಜೋಡಿಸಿ ಅದರ ಮೇಲಿನ ಪತ್ನಿ ಭಾವಚಿತ್ರಕ್ಕೆ ಆರೋಪಿ ಕುಂಕುಮ ಎರಚಿದ್ದಾನೆ ಎನ್ನಲಾಗಿದೆ.