<p><strong>ಹೊನ್ನಾವರ</strong>: ಅರಣ್ಯ ಭೂಮಿಗೆ ನಕಲಿ ಜಿಪಿಎಸ್ ದಾಖಲೆ ಸೃಷ್ಟಿಸಿದ ಆರೋಪದಡಿ ಭಟ್ಕಳ ತಾಲ್ಲೂಕು ಬೆಳಕೆ ಅರಣ್ಯ ವಲಯದ ಗಸ್ತು ವನಪಾಲಕ ಮಹಾಬಲ ಮಂಜು ಗೌಡ ಸೇರಿ 13 ಮಂದಿ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಹೊನ್ನಾವರ ಅರಣ್ಯ ವಲಯ ವ್ಯಾಪ್ತಿಯ ಜಲವಳ್ಳಿಯಲ್ಲಿನ ಅರಣ್ಯ ಭೂಮಿಯನ್ನು ಮಂಜೂರು ಮಾಡಿಕೊಳ್ಳುವ ದುರುದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿದ 8 ಮಂದಿ, ದಾಖಲೆ ಸೃಷ್ಟಿಸಲು ಸಹಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಸಿಬ್ಬಂದಿ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.</p><p>'ಹೊನ್ನಾವರ ತಾಲ್ಲೂಕಿನ ಮರಬಳ್ಳಿ ಗ್ರಾಮದವರಾದ ಮಾದೇವಿ ಗೌಡ, ಕನ್ನೆ ಗೌಡ, ಹನುಮಿ ಗೌಡ, ರಾಮಚಂದ್ರ ನಾಯ್ಕ, ಕೆರವಳ್ಳಿ ಗ್ರಾಮದವರಾದ ಆಶಿಸ್ ಅಲ್ಮೇಡಾ, ನಾರಾಯಣ ಗೌಡ, ಕಾನಗೋಡದ ಮಂಜು ಗೌಡ, ಚಿಕ್ಕನಕೋಡ ಗ್ರಾಮದ ರಾಜು ನಾಯ್ಕ ಅರಣ್ಯ ಭೂಮಿ ಮಂಜೂರು ಮಾಡಿಕೊಳ್ಳುವ ಯತ್ನದಿಂದ ನಕಲಿ ಜಿಪಿಎಸ್ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ಬೆಳಕೆ ಅರಣ್ಯ ವಲಯದ ಗಸ್ತು ವನಪಾಲಕ ಮಹಾಬಲ ಗೌಡ ನಕಲಿ ಜಿಪಿಎಸ್ ತೆಗೆದು ಕೊಟ್ಟಿದ್ದಾರೆ. ಇದಕ್ಕೆ ಮಂಕಿ ಲಕೋಟಕೇರಿಯ ನಾಗೇಶ ನಾಯ್ಕ ನಕಲಿ ನಕಾಶೆ ಸಿದ್ಧಪಡಿಸಿದ್ದಾರೆ. ಹೊನ್ನಾವರ ಪಟ್ಟಣದ ಶಿವಾನಿ ಬುಕ್ಸ್ಟಾಲ್ನಿಂದ ವಲಯ ಅರಣ್ಯಾಧಿಕಾರಿ ಕಚೇರಿಯ ನಕಲಿ ಸೀಲು ಬಳಸಿ, ದಾಖಲೆಗೆ ಮೊಹರು ಹಾಕಲಾಗಿದೆ. ಈ ದಾಖಲೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಭಾಸ್ಕರ ಗೌಡ ಮತ್ತು ಮಾಸ್ತಿ ಗೊಂಡ ಇಲಾಖೆಯ ಕಚೇರಿಯಲ್ಲಿನ ಅರಣ್ಯ ಹಕ್ಕು ಸಮಿತಿಯ (ಎಫ್ಆರ್ಸಿ) ಹಳೆಯ ಕಡತಕ್ಕೆ ಸೇರಿಸಿದ್ದಾರೆ' ಎಂದು ಹೊನ್ನಾವರ ಆರ್ಎಫ್ಒ ಸವಿತಾ ದೇವಾಡಿಗ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.</p><p><strong>'ಪ್ರಜಾವಾಣಿ' ವರದಿ ಎಚ್ಚರಿಸಿತ್ತು</strong></p><p>ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ತಲತಲಾಂತರಗಳಿಂದ ಸಾಗುವಳಿ ಮಾಡಿಕೊಂಡಿರುವವರ ಪಾಲಿಗೆ ಸರ್ಕಾರ ನಡೆಸುತ್ತಿರುವ ಜಂಟಿ ಸಮೀಕ್ಷೆ ಕಾರ್ಯ ಭರವಸೆ ಮೂಡಿಸಿದ್ದು ಒಂದೆಡೆಯಾದರೆ, ಅರಣ್ಯ ಭೂಮಿಯಲ್ಲಿ ವಾಸವಿರುವುದರ ಖಚಿತತೆಗೆ ಕೆಲವರು ನಕಲಿ ದಾಖಲೆ ಸೃಷ್ಟಿಸುತ್ತಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ ಎಂಬುದರ ಕುರಿತು 'ಪ್ರಜಾವಾಣಿ' ಫೆ.27ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.</p>.ಅರಣ್ಯ ಭೂಮಿ ಜಾಗದ ಜಂಟಿ ಸಮೀಕ್ಷೆ ಕಾರ್ಯ: ಮರುಪರಿಶೀಲನೆಗೆ ನಕಲಿ ದಾಖಲೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ</strong>: ಅರಣ್ಯ ಭೂಮಿಗೆ ನಕಲಿ ಜಿಪಿಎಸ್ ದಾಖಲೆ ಸೃಷ್ಟಿಸಿದ ಆರೋಪದಡಿ ಭಟ್ಕಳ ತಾಲ್ಲೂಕು ಬೆಳಕೆ ಅರಣ್ಯ ವಲಯದ ಗಸ್ತು ವನಪಾಲಕ ಮಹಾಬಲ ಮಂಜು ಗೌಡ ಸೇರಿ 13 ಮಂದಿ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಹೊನ್ನಾವರ ಅರಣ್ಯ ವಲಯ ವ್ಯಾಪ್ತಿಯ ಜಲವಳ್ಳಿಯಲ್ಲಿನ ಅರಣ್ಯ ಭೂಮಿಯನ್ನು ಮಂಜೂರು ಮಾಡಿಕೊಳ್ಳುವ ದುರುದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿದ 8 ಮಂದಿ, ದಾಖಲೆ ಸೃಷ್ಟಿಸಲು ಸಹಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಸಿಬ್ಬಂದಿ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.</p><p>'ಹೊನ್ನಾವರ ತಾಲ್ಲೂಕಿನ ಮರಬಳ್ಳಿ ಗ್ರಾಮದವರಾದ ಮಾದೇವಿ ಗೌಡ, ಕನ್ನೆ ಗೌಡ, ಹನುಮಿ ಗೌಡ, ರಾಮಚಂದ್ರ ನಾಯ್ಕ, ಕೆರವಳ್ಳಿ ಗ್ರಾಮದವರಾದ ಆಶಿಸ್ ಅಲ್ಮೇಡಾ, ನಾರಾಯಣ ಗೌಡ, ಕಾನಗೋಡದ ಮಂಜು ಗೌಡ, ಚಿಕ್ಕನಕೋಡ ಗ್ರಾಮದ ರಾಜು ನಾಯ್ಕ ಅರಣ್ಯ ಭೂಮಿ ಮಂಜೂರು ಮಾಡಿಕೊಳ್ಳುವ ಯತ್ನದಿಂದ ನಕಲಿ ಜಿಪಿಎಸ್ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ಬೆಳಕೆ ಅರಣ್ಯ ವಲಯದ ಗಸ್ತು ವನಪಾಲಕ ಮಹಾಬಲ ಗೌಡ ನಕಲಿ ಜಿಪಿಎಸ್ ತೆಗೆದು ಕೊಟ್ಟಿದ್ದಾರೆ. ಇದಕ್ಕೆ ಮಂಕಿ ಲಕೋಟಕೇರಿಯ ನಾಗೇಶ ನಾಯ್ಕ ನಕಲಿ ನಕಾಶೆ ಸಿದ್ಧಪಡಿಸಿದ್ದಾರೆ. ಹೊನ್ನಾವರ ಪಟ್ಟಣದ ಶಿವಾನಿ ಬುಕ್ಸ್ಟಾಲ್ನಿಂದ ವಲಯ ಅರಣ್ಯಾಧಿಕಾರಿ ಕಚೇರಿಯ ನಕಲಿ ಸೀಲು ಬಳಸಿ, ದಾಖಲೆಗೆ ಮೊಹರು ಹಾಕಲಾಗಿದೆ. ಈ ದಾಖಲೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಭಾಸ್ಕರ ಗೌಡ ಮತ್ತು ಮಾಸ್ತಿ ಗೊಂಡ ಇಲಾಖೆಯ ಕಚೇರಿಯಲ್ಲಿನ ಅರಣ್ಯ ಹಕ್ಕು ಸಮಿತಿಯ (ಎಫ್ಆರ್ಸಿ) ಹಳೆಯ ಕಡತಕ್ಕೆ ಸೇರಿಸಿದ್ದಾರೆ' ಎಂದು ಹೊನ್ನಾವರ ಆರ್ಎಫ್ಒ ಸವಿತಾ ದೇವಾಡಿಗ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.</p><p><strong>'ಪ್ರಜಾವಾಣಿ' ವರದಿ ಎಚ್ಚರಿಸಿತ್ತು</strong></p><p>ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ತಲತಲಾಂತರಗಳಿಂದ ಸಾಗುವಳಿ ಮಾಡಿಕೊಂಡಿರುವವರ ಪಾಲಿಗೆ ಸರ್ಕಾರ ನಡೆಸುತ್ತಿರುವ ಜಂಟಿ ಸಮೀಕ್ಷೆ ಕಾರ್ಯ ಭರವಸೆ ಮೂಡಿಸಿದ್ದು ಒಂದೆಡೆಯಾದರೆ, ಅರಣ್ಯ ಭೂಮಿಯಲ್ಲಿ ವಾಸವಿರುವುದರ ಖಚಿತತೆಗೆ ಕೆಲವರು ನಕಲಿ ದಾಖಲೆ ಸೃಷ್ಟಿಸುತ್ತಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ ಎಂಬುದರ ಕುರಿತು 'ಪ್ರಜಾವಾಣಿ' ಫೆ.27ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.</p>.ಅರಣ್ಯ ಭೂಮಿ ಜಾಗದ ಜಂಟಿ ಸಮೀಕ್ಷೆ ಕಾರ್ಯ: ಮರುಪರಿಶೀಲನೆಗೆ ನಕಲಿ ದಾಖಲೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>