<p><strong>ಹಳಿಯಾಳ:</strong> ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡೆಯ ಹವ್ಯಾಸ ಹೊಂದಿರಬೇಕು ಎಂದು ಬೆಂಗಳೂರು ಆರ್ಕ್ಟಿಟರ್ನ್ ಸೊಲ್ಯೂಷನ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಸನ್ನ ಕುಲಕರ್ಣಿ ಹೇಳಿದರು.</p>.<p>ಇಲ್ಲಿನ ಕರ್ನಾಟಕ ಲಾ ಸೊಸೈಟಿಯ ಬಿಸಿಎ ಮತ್ತು ಬಿಕಾಂ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಪ್ರಾರಂಭೋತ್ಸವ ‘ಲಕ್ಷ್ಯ್-2024’ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ. ದೇಶದಲ್ಲಿ ತಾಂತ್ರಿಕತೆ ಬೆಳದಂತೆ ಓದ್ಯೋಗಿಕ ಕ್ರಾಂತಿ ಆಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಣ ಸಾಧನೆಯ ದಾರಿಯಾಗಬೇಕು ಎಂದರು.</p>.<p>ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ, ಪ್ರಾಚಾರ್ಯ ಶ್ರೀನಿವಾಸ ಪ್ರಭು ಲಕ್ಷ್ಯ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ತೇಜಸ್ವಿನಿ ಮಠಪತಿ, ಮಿನಾಜ್ ಶೇಖ್, ಶ್ಲೋಕಾ ತೇಗುರ ಮಾತನಾಡಿದರು.</p>.<p>ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಾದ ಶ್ಯಾಂಡಿಲ್ಯಾ ಕೊಚ್ಚಾರಿ, ಅಲನ್ ಲೊಪಿಸ್, ಲಕ್ಷ್ಮಿ ಅಂಗ್ರೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಉನ್ನತಿ ರವಿಂದ್ರ ಪ್ರಾರ್ಥಿಸಿದರು, ಮಿಸ್ಬಾ ಸ್ವಾಗತಿಸಿದರು, ಸುಜಲ್ ಸಾಮಂತ ನಿರೂಪಿಸಿದರು.</p>.<p>ಉಪನ್ಯಾಸಕರಾದ ದೀಪಾ ನಾಯ್ಕ, ನಮೃತಾ ಗುರವ, ಸಂಗೀತಾ ಪ್ರಭು, ಮಾಧವ ಸುರತ್ಕರ, ಮಲ್ಲಿಕಾರ್ಜುನ ಕಾಜಗಾರ, ಮೆಹ್ತಾಬ್ ಶೇಖ, ವರುನ್ ಪಾಟಿಲ, ಪ್ರಗತಿ ಲಕ್ಕುಂಡಿ, ಸ್ವಾತಿ ಮೊರೆ, ಅಕ್ಷತಾ ಹುಲಿಕೇರಿ, ಎಂ.ವಿ. ಕಿರಣಕುಮಾರ, ಮಂಜುನಾಥ ಭೋವಿ ಮತ್ತು ವಿನಾಯಕ ಕಮ್ಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳಿಯಾಳ:</strong> ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡೆಯ ಹವ್ಯಾಸ ಹೊಂದಿರಬೇಕು ಎಂದು ಬೆಂಗಳೂರು ಆರ್ಕ್ಟಿಟರ್ನ್ ಸೊಲ್ಯೂಷನ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಸನ್ನ ಕುಲಕರ್ಣಿ ಹೇಳಿದರು.</p>.<p>ಇಲ್ಲಿನ ಕರ್ನಾಟಕ ಲಾ ಸೊಸೈಟಿಯ ಬಿಸಿಎ ಮತ್ತು ಬಿಕಾಂ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಪ್ರಾರಂಭೋತ್ಸವ ‘ಲಕ್ಷ್ಯ್-2024’ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ. ದೇಶದಲ್ಲಿ ತಾಂತ್ರಿಕತೆ ಬೆಳದಂತೆ ಓದ್ಯೋಗಿಕ ಕ್ರಾಂತಿ ಆಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಣ ಸಾಧನೆಯ ದಾರಿಯಾಗಬೇಕು ಎಂದರು.</p>.<p>ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ, ಪ್ರಾಚಾರ್ಯ ಶ್ರೀನಿವಾಸ ಪ್ರಭು ಲಕ್ಷ್ಯ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ತೇಜಸ್ವಿನಿ ಮಠಪತಿ, ಮಿನಾಜ್ ಶೇಖ್, ಶ್ಲೋಕಾ ತೇಗುರ ಮಾತನಾಡಿದರು.</p>.<p>ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಾದ ಶ್ಯಾಂಡಿಲ್ಯಾ ಕೊಚ್ಚಾರಿ, ಅಲನ್ ಲೊಪಿಸ್, ಲಕ್ಷ್ಮಿ ಅಂಗ್ರೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಉನ್ನತಿ ರವಿಂದ್ರ ಪ್ರಾರ್ಥಿಸಿದರು, ಮಿಸ್ಬಾ ಸ್ವಾಗತಿಸಿದರು, ಸುಜಲ್ ಸಾಮಂತ ನಿರೂಪಿಸಿದರು.</p>.<p>ಉಪನ್ಯಾಸಕರಾದ ದೀಪಾ ನಾಯ್ಕ, ನಮೃತಾ ಗುರವ, ಸಂಗೀತಾ ಪ್ರಭು, ಮಾಧವ ಸುರತ್ಕರ, ಮಲ್ಲಿಕಾರ್ಜುನ ಕಾಜಗಾರ, ಮೆಹ್ತಾಬ್ ಶೇಖ, ವರುನ್ ಪಾಟಿಲ, ಪ್ರಗತಿ ಲಕ್ಕುಂಡಿ, ಸ್ವಾತಿ ಮೊರೆ, ಅಕ್ಷತಾ ಹುಲಿಕೇರಿ, ಎಂ.ವಿ. ಕಿರಣಕುಮಾರ, ಮಂಜುನಾಥ ಭೋವಿ ಮತ್ತು ವಿನಾಯಕ ಕಮ್ಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>