ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದು, ಭಾನುವಾರ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಕದಂಬೋತ್ಸವ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಮುಖ್ಯ ವೇದಿಕೆ ಮತ್ತು ಅದರ ಎದುರು ಜನ ಕುಳಿತುಕೊಳ್ಳಲು ಸ್ಥಳ ಸಿದ್ಧತೆ, ಕ್ರೀಡಾ ಚಟುವಟಿಕೆ ಯಾವ ಕಡೆ ನಡೆಯಬೇಕೆಂಬ ಬಗ್ಗೆ ಸೂಚಿಸಿದರು. ಕುಸ್ತಿ ಅಖಾಡದ ಸಿದ್ಧತೆ ವೀಕ್ಷಿಸಿದರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ವೀಕ್ಷಣೆ ಮಾಡಿದರು. ಸ್ಟಾಲ್ಗಳ ನಿರ್ಮಾಣ ಮತ್ತು ಅದಕ್ಕೆ ಜಾಗ ಕೂಡಾ ನಿಗದಿ ಮಾಡಿದರು.