<p><strong>ಕಾರವಾರ</strong>: ಒಂದೂವರೆ ವರ್ಷದ ಹಿಂದೆ ಕುಸಿದು ಬಿದ್ದಿದ್ದ ಇಲ್ಲಿನ ಕಾಳಿ ನದಿಯ ಹಳೆಯ ಸೇತುವೆಯ ಜಾಗದಲ್ಲೇ ಉಕ್ಕಿನ ಕಮಾನಿನ ಮಾದರಿಯ ಹೊಸ ಸೇತುವೆ ನಿರ್ಮಾಣದ ಕೆಲಸ ಚುರುಕು ಪಡೆದಿದೆ. ಆದರೆ, ಕೆಲವಷ್ಟು ಸವಾಲು ಎದುರಾಗುವ ಸಾಧ್ಯತೆಯಿದೆ.</p>.<p>ಹಳೆ ಸೇತುವೆ ಇದ್ದ ಜಾಗದಲ್ಲಿ ಸಾಲು ಸಾಲಾಗಿ 8ಕ್ಕೂ ಹೆಚ್ಚು ಅಡಿಪಾಯ ಕಂಬಗಳಿವೆ. 1965ರಿಂದ 18 ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಮೂರು ಕಂಪನಿಗಳು ಪ್ರತ್ಯೇಕವಾಗಿ ಪ್ರಯತ್ನ ನಡೆಸಿದ್ದವು. ತಾಂತ್ರಿಕ ಸಮಸ್ಯೆಯಿಂದ ಅಡಿಪಾಯ ಕಂಬಗಳನ್ನು ಬದಲಿಸಲಾಗಿತ್ತು. ಇವುಗಳನ್ನು ಬಿಟ್ಟು ಹೊಸದಾಗಿ 6 ಅಡಿಪಾಯ ಕಂಬಗಳನ್ನು ಈಗ ನಿರ್ಮಿಸಬೇಕಿದೆ.</p>.<p>‘ಸೇತುವೆ ನಿರ್ಮಾಣಕ್ಕೂ ಮೊದಲು ಕಾಮಗಾರಿ ನಡೆಸುವ ಜಾಗದ ಆಳದಲ್ಲಿನ ಮಣ್ಣು, ಕಲ್ಲುಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಲು ಪೈಲಿಂಗ್ ಪರೀಕ್ಷೆ ನಡೆಸಲಾಗುವುದು. ಎರಡು ತಿಂಗಳ ಹಿಂದೆಯೇ ಈ ಚಟುವಟಿಕೆಯನ್ನು ಆರಂಭಿಸಿದ್ದೆವು. ಆದರೆ, ನಿಗದಿತ ಮಟ್ಟಕ್ಕಿಂತ ಮೇಲ್ಮೈನಲ್ಲೇ ಕಲ್ಲಿನ ಪದರ ಸಿಕ್ಕಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ಈಗ ಹೊಸದಾಗಿ ಜಾಗ ಗುರುತಿಸಿ ಪೈಲಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ತಿಳಿಸಿದೆ. ಸೇತುವೆಯನ್ನು ಈ ಸಂಸ್ಥೆಯು ನಿರ್ಮಿಸುತ್ತಿದೆ.</p>.<p>‘ಹಳೆಯ ಸೇತುವೆ ನಿರ್ಮಾಣಕ್ಕೆ ಬಳಕೆಯಾಗಿದ್ದ ಅಡಿಪಾಯ ಕಂಬಗಳನ್ನು ಸಂಸ್ಥೆಯು ಬಳಸುವುದಿಲ್ಲ. ಪ್ರತ್ಯೇಕವಾಗಿ 6 ಹೊಸ ಕಂಬಗಳನ್ನು ನಿರ್ಮಿಸಲಿದೆ. ಅದಕ್ಕೆ ಪೂರಕವಾಗಿ ನದಿಯೊಳಗೆ 40 ಮೀಟರ್ಗೂ ಹೆಚ್ಚು ಆಳದಲ್ಲಿ ರಂದ್ರ ಕೊರೆದು ಉಕ್ಕಿನ ಕಂಬಗಳನ್ನು ಅಳವಡಿಸಿ, ಕಾಂಕ್ರೀಟ್ ಭರ್ತಿ ಮಾಡುವ ಪೈಲಿಂಗ್ ಚಟುವಟಿಕೆ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದರು.</p>.<p>‘ಪ್ರತಿ ಕಂಬಕ್ಕೆ ಒಂದರಂತೆ 6 ಸ್ಥಳದಲ್ಲಿ ಪೈಲಿಂಗ್ ನಡೆಯಲಿದೆ. ಸೇತುವೆಗೆ ಭದ್ರ ಅಡಿಪಾಯ ಒದಗಿಸುವ ಈ ಪ್ರಕ್ರಿಯೆ ಉಕ್ಕಿನ ಕಂಬಗಳ ಅಳವಡಿಕೆ, ಕಾಂಕ್ರೀಟ್ ಪದರ ಸೇರಿ ಆರು ಹಂತಗಳನ್ನು ಒಳಗೊಳ್ಳಲಿದೆ. ಪ್ರತಿ ಪೈಲಿಂಗ್ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಸಮಯ ಬೇಕಾಗಬಹುದು’ ಎಂದರು.</p>.<p> ಒಂದು ಪೈಲಿಂಗ್ ಪ್ರಕ್ರಿಯೆಗೆ 2 ತಿಂಗಳು ಬೇಕು ಹೊಸದಾಗಿ 6 ಕಂಬಗಳ ನಿರ್ಮಾಣಕ್ಕೆ ನಿರ್ಣಯ 40 ಮೀಟರ್ಗೂ ಹೆಚ್ಚು ಆಳವುಳ್ಳ ರಂದ್ರ</p>.<div><blockquote>ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣ ಜವಾಬ್ದಾರಿಯನ್ನು ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ವಹಿಸಲಾಗಿದೆ. ಎರಡು ವರ್ಷದ ಗಡುವು ನೀಡಲಾಗಿದೆ </blockquote><span class="attribution"> ಕೆ.ಶಿವಕುಮಾರ್ ಯೋಜನಾ ನಿರ್ದೇಶಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ</span></div>.<div><blockquote>ವಾಹನ ದಟ್ಟಣೆ ತಗ್ಗಿಸಲು ಕಾಳಿ ನದಿಗೆ ಎರಡು ಸೇತುವೆ ನಿರ್ಮಿಸಲಾಗಿತ್ತು. ಈಗ ಒಂದೇ ಸೇತುವೆ ಮೇಲೆ ವಾಹನಗಳ ಒತ್ತಡ ಹೆಚ್ಚಿದೆ. ಹೊಸ ಸೇತುವೆ ನಿರ್ಮಾಣ ಬೇಗನೇ ಪೂರ್ಣಗೊಳ್ಳಲಿ. </blockquote><span class="attribution">ಸದಾನಂದ ಮಾಂಜ್ರೇಕರ್ ಸ್ಥಳೀಯ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಒಂದೂವರೆ ವರ್ಷದ ಹಿಂದೆ ಕುಸಿದು ಬಿದ್ದಿದ್ದ ಇಲ್ಲಿನ ಕಾಳಿ ನದಿಯ ಹಳೆಯ ಸೇತುವೆಯ ಜಾಗದಲ್ಲೇ ಉಕ್ಕಿನ ಕಮಾನಿನ ಮಾದರಿಯ ಹೊಸ ಸೇತುವೆ ನಿರ್ಮಾಣದ ಕೆಲಸ ಚುರುಕು ಪಡೆದಿದೆ. ಆದರೆ, ಕೆಲವಷ್ಟು ಸವಾಲು ಎದುರಾಗುವ ಸಾಧ್ಯತೆಯಿದೆ.</p>.<p>ಹಳೆ ಸೇತುವೆ ಇದ್ದ ಜಾಗದಲ್ಲಿ ಸಾಲು ಸಾಲಾಗಿ 8ಕ್ಕೂ ಹೆಚ್ಚು ಅಡಿಪಾಯ ಕಂಬಗಳಿವೆ. 1965ರಿಂದ 18 ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಮೂರು ಕಂಪನಿಗಳು ಪ್ರತ್ಯೇಕವಾಗಿ ಪ್ರಯತ್ನ ನಡೆಸಿದ್ದವು. ತಾಂತ್ರಿಕ ಸಮಸ್ಯೆಯಿಂದ ಅಡಿಪಾಯ ಕಂಬಗಳನ್ನು ಬದಲಿಸಲಾಗಿತ್ತು. ಇವುಗಳನ್ನು ಬಿಟ್ಟು ಹೊಸದಾಗಿ 6 ಅಡಿಪಾಯ ಕಂಬಗಳನ್ನು ಈಗ ನಿರ್ಮಿಸಬೇಕಿದೆ.</p>.<p>‘ಸೇತುವೆ ನಿರ್ಮಾಣಕ್ಕೂ ಮೊದಲು ಕಾಮಗಾರಿ ನಡೆಸುವ ಜಾಗದ ಆಳದಲ್ಲಿನ ಮಣ್ಣು, ಕಲ್ಲುಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಲು ಪೈಲಿಂಗ್ ಪರೀಕ್ಷೆ ನಡೆಸಲಾಗುವುದು. ಎರಡು ತಿಂಗಳ ಹಿಂದೆಯೇ ಈ ಚಟುವಟಿಕೆಯನ್ನು ಆರಂಭಿಸಿದ್ದೆವು. ಆದರೆ, ನಿಗದಿತ ಮಟ್ಟಕ್ಕಿಂತ ಮೇಲ್ಮೈನಲ್ಲೇ ಕಲ್ಲಿನ ಪದರ ಸಿಕ್ಕಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ಈಗ ಹೊಸದಾಗಿ ಜಾಗ ಗುರುತಿಸಿ ಪೈಲಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ತಿಳಿಸಿದೆ. ಸೇತುವೆಯನ್ನು ಈ ಸಂಸ್ಥೆಯು ನಿರ್ಮಿಸುತ್ತಿದೆ.</p>.<p>‘ಹಳೆಯ ಸೇತುವೆ ನಿರ್ಮಾಣಕ್ಕೆ ಬಳಕೆಯಾಗಿದ್ದ ಅಡಿಪಾಯ ಕಂಬಗಳನ್ನು ಸಂಸ್ಥೆಯು ಬಳಸುವುದಿಲ್ಲ. ಪ್ರತ್ಯೇಕವಾಗಿ 6 ಹೊಸ ಕಂಬಗಳನ್ನು ನಿರ್ಮಿಸಲಿದೆ. ಅದಕ್ಕೆ ಪೂರಕವಾಗಿ ನದಿಯೊಳಗೆ 40 ಮೀಟರ್ಗೂ ಹೆಚ್ಚು ಆಳದಲ್ಲಿ ರಂದ್ರ ಕೊರೆದು ಉಕ್ಕಿನ ಕಂಬಗಳನ್ನು ಅಳವಡಿಸಿ, ಕಾಂಕ್ರೀಟ್ ಭರ್ತಿ ಮಾಡುವ ಪೈಲಿಂಗ್ ಚಟುವಟಿಕೆ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದರು.</p>.<p>‘ಪ್ರತಿ ಕಂಬಕ್ಕೆ ಒಂದರಂತೆ 6 ಸ್ಥಳದಲ್ಲಿ ಪೈಲಿಂಗ್ ನಡೆಯಲಿದೆ. ಸೇತುವೆಗೆ ಭದ್ರ ಅಡಿಪಾಯ ಒದಗಿಸುವ ಈ ಪ್ರಕ್ರಿಯೆ ಉಕ್ಕಿನ ಕಂಬಗಳ ಅಳವಡಿಕೆ, ಕಾಂಕ್ರೀಟ್ ಪದರ ಸೇರಿ ಆರು ಹಂತಗಳನ್ನು ಒಳಗೊಳ್ಳಲಿದೆ. ಪ್ರತಿ ಪೈಲಿಂಗ್ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಸಮಯ ಬೇಕಾಗಬಹುದು’ ಎಂದರು.</p>.<p> ಒಂದು ಪೈಲಿಂಗ್ ಪ್ರಕ್ರಿಯೆಗೆ 2 ತಿಂಗಳು ಬೇಕು ಹೊಸದಾಗಿ 6 ಕಂಬಗಳ ನಿರ್ಮಾಣಕ್ಕೆ ನಿರ್ಣಯ 40 ಮೀಟರ್ಗೂ ಹೆಚ್ಚು ಆಳವುಳ್ಳ ರಂದ್ರ</p>.<div><blockquote>ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣ ಜವಾಬ್ದಾರಿಯನ್ನು ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ವಹಿಸಲಾಗಿದೆ. ಎರಡು ವರ್ಷದ ಗಡುವು ನೀಡಲಾಗಿದೆ </blockquote><span class="attribution"> ಕೆ.ಶಿವಕುಮಾರ್ ಯೋಜನಾ ನಿರ್ದೇಶಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ</span></div>.<div><blockquote>ವಾಹನ ದಟ್ಟಣೆ ತಗ್ಗಿಸಲು ಕಾಳಿ ನದಿಗೆ ಎರಡು ಸೇತುವೆ ನಿರ್ಮಿಸಲಾಗಿತ್ತು. ಈಗ ಒಂದೇ ಸೇತುವೆ ಮೇಲೆ ವಾಹನಗಳ ಒತ್ತಡ ಹೆಚ್ಚಿದೆ. ಹೊಸ ಸೇತುವೆ ನಿರ್ಮಾಣ ಬೇಗನೇ ಪೂರ್ಣಗೊಳ್ಳಲಿ. </blockquote><span class="attribution">ಸದಾನಂದ ಮಾಂಜ್ರೇಕರ್ ಸ್ಥಳೀಯ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>