ಸ್ವಚ್ಛತಾ ಸಂಕೀರ್ಣಕ್ಕೆ ಎರಡು ಜಾಗ ಗುರುತಿಸಲಾಗಿದ್ದು ಜಿಲ್ಲಾಧಿಕಾರಿ ಅಂತಿಮ ಆದೇಶಕ್ಕೆ ಕಾಯಲಾಗುತ್ತಿದೆ. ಜಾಗ ಸಿಕ್ಕ ಬಳಿಕ ತಾತ್ಕಾಲಿಕ ವಿಲೇವಾರಿ ಘಟಕ ನಿರ್ಮಿಸಿ ಕಸ ಸಂಗ್ರಹ ಪ್ರಕ್ರಿಯೆ ಆರಂಭಿಸಲಾಗುತ್ತದೆ
ವೀರನಗೌಡರ ಏಗನಗೌಡರ ತಾಲ್ಲೂಕು ಪಂಚಾಯಿತಿ ಇಒ
‘ಸಿಗದ ಸಹಕಾರ’
‘ಜನವಸತಿ ಶಾಲೆ ಅಂಗನವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪವೇ ಸ್ವಚ್ಛತಾ ಸಂಕೀರ್ಣ ಇದೆ ಎಂಬ ಕಾರಣಕ್ಕೆ ಸ್ಥಳಾಂತರಕ್ಕೆ ಒತ್ತಡ ಹೆಚ್ಚಿತು. ಘಟಕ ಸ್ಥಳಾಂತರಕ್ಕೆ ಹಲವು ಜಾಗ ಗುರುತಿಸಲಾಯಿತಾದರೂ ಜಾಗ ಗುರುತಿಸಿದ ಸ್ಥಳದ ಸಮೀಪದ ಜನರು ವಿರೋಧಿಸಿದ್ದಾರೆ. ಕಸವನ್ನು ಹೆದ್ದಾರಿ ಪಕ್ಕ ಎಸೆಯುವ ಚಾಳಿ ಹೆಚ್ಚಿದೆ. ಅದರ ನಿಯಂತ್ರಣಕ್ಕೆ ಪೊಲೀಸರ ಸಹಕಾರ ಕೋರಿದ್ದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೂರಜ್ ದೇಸಾಯಿ ಹೇಳಿದರು.