<p><strong>ಶಿರಸಿ: </strong>ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ ವೇಳೆ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು ಬೂಂದು ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ.</p>.<p>ದೇವಸ್ಥಾನದ ಭೋಜನಾಲಯದಲ್ಲಿ ಕಳೆದ ಎರಡು ದಿನಗಳಿಂದ ಸ್ಥಳೀಯ ಪಾಕ ಪ್ರವೀಣರು ಲಡ್ಡು ತಯಾರಿಸಲು ಬೂಂದಿ ಕಾಳುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮಾ.15ರ ಒಳಗೆ 3 ಲಕ್ಷ ಲಡ್ಡುಗಳನ್ನು ತಯಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ.</p>.<p>ದೇವಿಯ ದರ್ಶನದ ಬಳಿಕ ಭಕ್ತರು ಪ್ರಸಾದ ಚೀಟಿ ನೀಡಿ ಲಡ್ಡು ಪಡೆಯಲು ಅವಕಾಶವಿದೆ. ಒಂದು ಲಡ್ಡು ಪಡೆಯಲು ₹20 ಶುಲ್ಕ ನಿಗದಿಪಡಿಸಲಾಗಿದೆ. ಜಾತ್ರೆ ವೇಳೆ ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ಈ ಬಾರಿ ಕಳೆದ ವರ್ಷಕ್ಕಿಂತ ಒಂದು ಲಕ್ಷ ಹೆಚ್ಚುವರಿ ಲಡ್ಡು ಸಿದ್ಧಪಡಿಸಲಾಗುತ್ತಿದೆ.</p>.<p>‘ಸೀಮಿತ ಅವಧಿಯಲ್ಲಿ ಲಕ್ಷಾಂತರ ಲಡ್ಡು ತಯಾರಿಸಬೇಕಿದೆ. ಹೀಗಾಗಿ ನುರಿತ ಸಿಬ್ಬಂದಿ ಜತೆಗೆ ಯಂತ್ರಗಳನ್ನು ಬಳಸಿ ಲಡ್ಡು ಸಿದ್ಧಪಡಿಸುತ್ತೇವೆ’ ಎನ್ನುತ್ತಾರೆ ಲಡ್ಡು ತಯಾರಿ ಗುತ್ತಿಗೆ ಪಡೆದ ಗಣೇಶ ಹೆಗಡೆ ಗೌರಿಬಣ್ಣಿಗೆ.</p>.<p>‘ಮೂರು ಲಕ್ಷ ಲಡ್ಡು ಸಿದ್ಧಪಡಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ಸಿದ್ಧಪಡಿಸಲಾಗುವುದು. ಜಾತ್ರೆಗೆ ಬರುವ ಭಕ್ತರ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸಾಮಗ್ರಿಗಳನ್ನು ಮುಂಚಿತವಾಗಿ ಸಿದ್ಧವಿಟ್ಟುಕೊಂಡಿದ್ದೇವೆ’ ಎಂದು ಮಾರಿಕಾಂಬಾ ದೇವಾಲಯದ ವ್ಯವಸ್ಥಾಪಕ ಚಂದ್ರಕಾಂತ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ ವೇಳೆ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು ಬೂಂದು ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ.</p>.<p>ದೇವಸ್ಥಾನದ ಭೋಜನಾಲಯದಲ್ಲಿ ಕಳೆದ ಎರಡು ದಿನಗಳಿಂದ ಸ್ಥಳೀಯ ಪಾಕ ಪ್ರವೀಣರು ಲಡ್ಡು ತಯಾರಿಸಲು ಬೂಂದಿ ಕಾಳುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮಾ.15ರ ಒಳಗೆ 3 ಲಕ್ಷ ಲಡ್ಡುಗಳನ್ನು ತಯಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ.</p>.<p>ದೇವಿಯ ದರ್ಶನದ ಬಳಿಕ ಭಕ್ತರು ಪ್ರಸಾದ ಚೀಟಿ ನೀಡಿ ಲಡ್ಡು ಪಡೆಯಲು ಅವಕಾಶವಿದೆ. ಒಂದು ಲಡ್ಡು ಪಡೆಯಲು ₹20 ಶುಲ್ಕ ನಿಗದಿಪಡಿಸಲಾಗಿದೆ. ಜಾತ್ರೆ ವೇಳೆ ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ಈ ಬಾರಿ ಕಳೆದ ವರ್ಷಕ್ಕಿಂತ ಒಂದು ಲಕ್ಷ ಹೆಚ್ಚುವರಿ ಲಡ್ಡು ಸಿದ್ಧಪಡಿಸಲಾಗುತ್ತಿದೆ.</p>.<p>‘ಸೀಮಿತ ಅವಧಿಯಲ್ಲಿ ಲಕ್ಷಾಂತರ ಲಡ್ಡು ತಯಾರಿಸಬೇಕಿದೆ. ಹೀಗಾಗಿ ನುರಿತ ಸಿಬ್ಬಂದಿ ಜತೆಗೆ ಯಂತ್ರಗಳನ್ನು ಬಳಸಿ ಲಡ್ಡು ಸಿದ್ಧಪಡಿಸುತ್ತೇವೆ’ ಎನ್ನುತ್ತಾರೆ ಲಡ್ಡು ತಯಾರಿ ಗುತ್ತಿಗೆ ಪಡೆದ ಗಣೇಶ ಹೆಗಡೆ ಗೌರಿಬಣ್ಣಿಗೆ.</p>.<p>‘ಮೂರು ಲಕ್ಷ ಲಡ್ಡು ಸಿದ್ಧಪಡಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ಸಿದ್ಧಪಡಿಸಲಾಗುವುದು. ಜಾತ್ರೆಗೆ ಬರುವ ಭಕ್ತರ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸಾಮಗ್ರಿಗಳನ್ನು ಮುಂಚಿತವಾಗಿ ಸಿದ್ಧವಿಟ್ಟುಕೊಂಡಿದ್ದೇವೆ’ ಎಂದು ಮಾರಿಕಾಂಬಾ ದೇವಾಲಯದ ವ್ಯವಸ್ಥಾಪಕ ಚಂದ್ರಕಾಂತ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>