ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಆ ಮತಗಳನ್ನು ಸೆಳೆಯಲು ನಮಗೆ ಸಾಧ್ಯವಾಗಲಿಲ್ಲ. ಆಡಳಿತ ವಿರೋಧಿ ಅಲೆಯ ಮತಗಳು ಕಾಂಗ್ರೆಸ್ಗೆ ಹೋದವು. ಬಿ ಪಾರಂ ದೊರೆಯಲು ತಡವಾದ ಕಾರಣ ಪ್ರಚಾರಕ್ಕೆ ಸಮಯದ ಕೊರತೆಯೂ ಉಂಟಾಯಿತು. ಕೊನೆಯ ಕ್ಷಣದಲ್ಲಿ ಕೆಲವರು ಪಕ್ಷ ತೊರೆದು ಮತದಾರರಿಗೆ ಗೊಂದಲ ಉಂಟುಮಾಡಿದರಲ್ಲದೇ ಪಕ್ಷದ ವಿರುದ್ಧ ಅಪಪ್ರಚಾರ ನಡೆಸಿದರು. ಇವೆಲ್ಲವೂ ಪಕ್ಷದ ಹಿನ್ನಡೆಗೆ ಕಾರಣವಾಯಿತು' ಎಂದರು.