ನಿರಂಜನ ದೇಸಾಯಿ ನಾಮಪತ್ರ ಸಲ್ಲಿಕೆಯ ವೇಳೆ ನಾಡದ್ರೋಹದ ಮಾತನಾಡಿದ್ದು, ಅನಾವಶ್ಯಕವಾಗಿ ಜನರಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಗೂ ವಿರುದ್ಧವಾದದ್ದು, ಜೊಯಿಡಾದಲ್ಲಿ ಯಾರೂ ಕೂಡಾ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳುತ್ತಿಲ್ಲ. ಈ ಭಾಗದ ಎಲ್ಲ ಜನರು ಕನ್ನಡ ನಾಡಿಗೆ ನಿಷ್ಠರಾಗಿ ಬದುಕುತ್ತಿದ್ದಾರೆ. ಹೀಗಿರುವಾಗ ನಿರಂಜನ ದೇಸಾಯಿ ಅನಾವಶ್ಯಕವಾಗಿ ಚುನಾವಣೆಯ ವೇಳೆ ಗಡಿ, ನುಡಿಯ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನಾರ್ಹವಾದದ್ದು ಎಂದರು.