‘ಸುತ್ತಲಿನ ಮಿರ್ಜಾನ್ , ಕೊಡಕಣಿ, ಬರ್ಗಿ, ಕಿಮಾನಿಯಿಂದ ನಿತ್ಯ ಹಲವರು ಆಸ್ಪತ್ರೆ, ಉದ್ಯೋಗ, ವ್ಯವಹಾರದ ಉದ್ದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲು ಹಿಡಿಯಲು ದೂರದ ಕುಮಟಾ ಅಥವಾ ಗೋಕರ್ಣ ನಿಲ್ದಾಣಕ್ಕೆ ಹೋಗುವ ಬದಲು ಮಿರ್ಜಾನ್ ನಿಲ್ದಾಣದಲ್ಲೇ ಪ್ಯಾಸೆಂಜರ್ ಹಾಗೂ ಮೆಮು ರೈಲಿಗೆ ನಿಲುಗಡೆ ನೀಡಿದರೆ ಅನುಕೂಲವಾಗುತ್ತದೆ. ಈಗಾಗಲೇ ಈ ಬಗ್ಗೆ ರೇಲು ಮಂಡಳಿಗೆ ಮನವಿ ನೀಡಲಾಗಿದ್ದು, ಕೊಂಕಣ ರೈಲು ಮಂಡಳಿ ಸದಸ್ಯ ಶಾಸಕ ಸತೀಶ ಸೈಲ್ ಅವರೊಂದಿಗೆ ಸಂಬಂಧಿಸಿದ ಹಿರಿಯ ಅಧಿಕಾರಿಯನ್ನೂ ಭೇಟಿ ಮಾಡಿ ಚರ್ಚಿಸುವೆ’ ಎನ್ನುತ್ತಾರೆ ರಾಜೀವ.