ಇದುವರೆಗೆ ತಾಲ್ಲೂಕಿನಲ್ಲಿ 21 ಮಂಗಗಳು ಸತ್ತಿದ್ದು, ಮನುಷ್ಯರಿಗೆ ಮಂಗನ ಕಾಯಿಲೆ ಬಂದಿರುವ ಬಗ್ಗೆ ವರದಿಯಾಗಿಲ್ಲ. ಇಟಗಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಲಾಗುವುದು. ಜನರು ಕಾಡಿಗೆ ಸೊಪ್ಪು, ದರಕು ತರುವುದಕ್ಕೆ ತೆರಳಬಾರದು. ಕಾಡಿಗೆ ಅಥವಾ ತೋಟಕ್ಕೆ ತೆರಳಬೇಕಾದರೆ ಡಿಎಂಪಿ ತೈಲ ಲೇಪಿಸಿಕೊಳ್ಳಬೇಕು. ಒಂದೊಮ್ಮೆ ಜ್ವರದ ಪ್ರಕರಣ ಕಂಡುಬಂದರೆ ತಕ್ಷಣ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.