<p><strong>ಕಾರವಾರ:</strong>ತಾಲ್ಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಗೆದೇವಳಮಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಭಾಗಶಃ ಕುಸಿದೆ. ಮಣ್ಣಿನಿಂದ ಮಾಡಲಾದ ಗೋಡೆ ಇದೀಗ ಮತ್ತಷ್ಟು ಅಪಾಯ ಎದುರಿಸುತ್ತಿದೆ.</p>.<p>1950ರಲ್ಲಿ ನಿರ್ಮಿಸಲಾದ ಈಶಾಲಾ ಕೊಠಡಿಯನ್ನು ದುರಸ್ತಿ ಮಾಡುವಂತೆ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಠರಾವು ಮಾಡಿ ಶಿಕ್ಷಣ ಇಲಾಖೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.ಆದರೆ, ದುರಸ್ತಿಯಾಗಲೀ ಹೊಸ ಗೋಡೆಯ ನಿರ್ಮಾಣವಾಗಲೀ ಆಗಿರಲಿಲ್ಲ.</p>.<p>ಭಾಗಶಃ ಕುಸಿದಿರುವ ಕೊಠಡಿಯಲ್ಲಿ ಆಟದ ಸಾಮಗ್ರಿ, ಕಲಿಕಾಸಾಮಗ್ರಿ ಹಾಗೂ ಹಳೆಯ ವಿದ್ಯಾರ್ಥಿಗಳ ದಾಖಲಾತಿ ಪತ್ರಗಳಿವೆ. ಮಳೆ ಮತ್ತಷ್ಟು ಬಂದು ಅಕಸ್ಮಾತ್ ಉಳಿದ ಗೋಡೆಗಳೂ ಬಿದ್ದರೆಅವು ಸಂಪೂರ್ಣ ಹಾಳಾಗುತ್ತವೆ. ಅಲ್ಲದೇಲಕ್ಷಾಂತರ ರೂಪಾಯಿ ನಷ್ಟವಾಗುವಸಾಧ್ಯತೆಯಿದೆ. ಹಳೆಯ ಕೊಠಡಿಗಳನ್ನುಮಳೆಗಾಲಕ್ಕೂ ಮೊದಲೇ ದುರಸ್ತಿ ಮಾಡಲು ಶಿಕ್ಷಣ ಇಲಾಖೆಯು ಅವಕಾಶ ಕೊಟ್ಟಿದರೆ ಸಾಮಗ್ರಿಯನ್ನುಬೇರೆ ಕಡೆ ಸ್ಥಳಾಂತರಿಸಲು ಆಗುತ್ತಿತ್ತು ಎಂದು ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong>ತಾಲ್ಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಗೆದೇವಳಮಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಭಾಗಶಃ ಕುಸಿದೆ. ಮಣ್ಣಿನಿಂದ ಮಾಡಲಾದ ಗೋಡೆ ಇದೀಗ ಮತ್ತಷ್ಟು ಅಪಾಯ ಎದುರಿಸುತ್ತಿದೆ.</p>.<p>1950ರಲ್ಲಿ ನಿರ್ಮಿಸಲಾದ ಈಶಾಲಾ ಕೊಠಡಿಯನ್ನು ದುರಸ್ತಿ ಮಾಡುವಂತೆ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಠರಾವು ಮಾಡಿ ಶಿಕ್ಷಣ ಇಲಾಖೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.ಆದರೆ, ದುರಸ್ತಿಯಾಗಲೀ ಹೊಸ ಗೋಡೆಯ ನಿರ್ಮಾಣವಾಗಲೀ ಆಗಿರಲಿಲ್ಲ.</p>.<p>ಭಾಗಶಃ ಕುಸಿದಿರುವ ಕೊಠಡಿಯಲ್ಲಿ ಆಟದ ಸಾಮಗ್ರಿ, ಕಲಿಕಾಸಾಮಗ್ರಿ ಹಾಗೂ ಹಳೆಯ ವಿದ್ಯಾರ್ಥಿಗಳ ದಾಖಲಾತಿ ಪತ್ರಗಳಿವೆ. ಮಳೆ ಮತ್ತಷ್ಟು ಬಂದು ಅಕಸ್ಮಾತ್ ಉಳಿದ ಗೋಡೆಗಳೂ ಬಿದ್ದರೆಅವು ಸಂಪೂರ್ಣ ಹಾಳಾಗುತ್ತವೆ. ಅಲ್ಲದೇಲಕ್ಷಾಂತರ ರೂಪಾಯಿ ನಷ್ಟವಾಗುವಸಾಧ್ಯತೆಯಿದೆ. ಹಳೆಯ ಕೊಠಡಿಗಳನ್ನುಮಳೆಗಾಲಕ್ಕೂ ಮೊದಲೇ ದುರಸ್ತಿ ಮಾಡಲು ಶಿಕ್ಷಣ ಇಲಾಖೆಯು ಅವಕಾಶ ಕೊಟ್ಟಿದರೆ ಸಾಮಗ್ರಿಯನ್ನುಬೇರೆ ಕಡೆ ಸ್ಥಳಾಂತರಿಸಲು ಆಗುತ್ತಿತ್ತು ಎಂದು ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>