ಉಂಡ ಮನೆಗೇ ಕನ್ನ: ಮುಂಬೈನ ಜುಹೂ ಪ್ರದೇಶದಲ್ಲಿ ಉದ್ಯಮಿ, 73 ವರ್ಷದ ದುಗ್ಗಡ್ ಎಂಬುವವರ ಆರೋಪಿಗಳು ಮೂರು ತಿಂಗಳಿನಿಂದ ಕೆಲಸಕ್ಕಿದ್ದರು. ದರೋಡೆಗೆ ಸಂಚು ರೂಪಿಸಿದ್ದ ಅವರು, ಉದ್ಯಮಿಗೆ ಮಾರ್ಚ್31ರಂದು ಬೆಳಿಗ್ಗೆ ಮತ್ತು ಬರುವ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಮುಂಬೈನಿಂದ ಮಂಗಳೂರು ಕಡೆಗೆ ತೆರಳುವ ಬಸ್ನಲ್ಲಿ ಬಂದ ಆರೋಪಿಗಳು, ಹುಬ್ಬಳ್ಳಿಯಲ್ಲಿ ಇಳಿಯಬೇಕಾಗಿತ್ತು. ಆದರೆ,ಏ.1ರಂದು ಬೆಳಗಿನ ಜಾವ ಅಂಕೋಲಾದಲ್ಲಿಬಂದು ಇಳಿದರು.