ಕಡಲತೀರದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ದ್ರವ ತ್ಯಾಜ್ಯ, ಕಸಕಡ್ಡಿಗಳನ್ನು ಬಿಸಾಡಲಾಗುತ್ತಿದೆ. ಇದರಿಂದ ಕಡಲ ತೀರಕ್ಕೆ ಬರುವ ಪ್ರವಾಸಿಗರಿಗೆ ಅಸಹನೀಯ ವಾತಾವರಣ ಉಂಟಾಗುತ್ತಿದೆ. ಜಗತ್ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರವು ಅನೈರ್ಮಲ್ಯದಿಂದ ಕೂಡಿರುವುದನ್ನು ಕಂಡು ಬಹಳ ಬೇಸರಿಸಿಕೊಳ್ಳುತ್ತಿದ್ದಾರೆ. ಕೆಲವು ಅಂಗಡಿಕಾರರು ವಹಿವಾಟು ಮುಗಿಸಿ ರಾತ್ರಿ ಮನೆಗೆ ತೆರಳುವ ಮೊದಲು ಕಡಲತೀರದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವ ಬಗ್ಗೆಯೂ ದೂರುಗಳಿವೆ ಎಂದು ಗಮನ ಸೆಳೆದರು.