ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತ್ಯೇಕ ಜಿಲ್ಲೆ ಸ್ಥಾಪನೆಯ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು, ಲೋಕಸಭಾ ಸದಸ್ಯರು, ಬುದ್ಧಿಜೀವಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಬೇಕು. ನಂತರ ಜಿಲ್ಲಾ ಕೇಂದ್ರವು ಯಲ್ಲಾಪುರದಲ್ಲೋ, ಶಿರಸಿಯಲ್ಲೋ ಅಥವಾ ಹಳಿಯಾಳದಲ್ಲೋ ಎಂದು ನಿರ್ಧರಿಸವಾಗಬೇಕು. ಅದಕ್ಕೆ ನಿರ್ದಿಷ್ಟವಾದ ದಿನ ಇನ್ನೂ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.