ಕಟಾವಿಗೆ ಬಂದಿದ್ದ ಭತ್ತ, ಕಟಾವಾಗಿದ್ದ ಮೆಕ್ಕೆಜೋಳದ ಫಸಲು ಮಳೆ ನೀರಿನಲ್ಲಿ ಸಂಪೂರ್ಣವಾಗಿ ನೆನೆದು ಹಾಳಾಗಿದೆ. ಅಂಕೋಲಾ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ತಾಲ್ಲೂಕಿನ ಮಕ್ಕಿಗದ್ದೆ, ಮಂಜಗುಣಿ, ಅಗಸೂರು ಸುತ್ತಮುತ್ತ ಗದ್ದೆಗಳಲ್ಲಿ ಮಳೆ ನೀರು ಹರಿದು ಪೈರು ನಾಶವಾಗಿದೆ. ಗದ್ದೆಗಳ ಸಮೀಪದ ಹಳ್ಳ ಉಕ್ಕಿ ಹರಿದು, ಗುಡ್ಡದ ಮೇಲಿನ ಮಣ್ಣು ಗದ್ದೆಯಲ್ಲಿ ಸೇರಿಕೊಂಡಿದೆ.