ರೇವಣಕಟ್ಟಾದ ಮಹಮ್ಮದ್ ರಿಯಾಜ್ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಶಿಸ್ತು ಪಾಲನೆ ಕಷ್ಟವಾಗುತ್ತದೆ. ಯುವಜನರಿಗೆ ಆಡಳಿತವೇ ತಿಳಿ ಹೇಳಬೇಕು’ ಎಂದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಸಿಪಿಐ ಪ್ರದೀಪ ಬಿ.ಯು, ಪಿಎಸ್ಐಗಳಾದ ನಾಗಪ್ಪ ಬಿ, ಶಿವಾನಂಗ ನಾವಲಗಿ, ಅಬೂಜರ್ ಹೆಗಡೆಕಟ್ಟಾ, ಎ. ರೆಹಮಾನ್, ತಾಲ್ಲೂಕಿನ ಎಲ್ಲ ಮಸೀದಿ ಸಮಿತಿಗಳ ಮುಖ್ಯಸ್ಥರು, ಮುಖಂಡರು ಇದ್ದರು.