ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೇರಿದರೆ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂಬ ಉದ್ದೇಶವಿದೆಯೇ ಹೊರತು ಬೇರೆ ಯಾವ ರಾಜಕೀಯ ದುರುದ್ದೇಶವೂ ಇಲ್ಲ.
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ಭಟ್ಕಳ ನಗರಸಭೆ ರಚನೆಗೆ ವಿರೋಧವಿಲ್ಲ. ಆದರೆ ಸಮುದಾಯವೊಂದರ ಓಲೈಕೆಗೆ ನಿರ್ದಿಷ್ಟ ಪ್ರದೇಶ ಮಾತ್ರ ಸೇರಿಸದೆ ಪಟ್ಟಣದ ಗಡಿಗೆ ಹೊಂದಿಕೊಂಡ ಉಳಿದ ಗ್ರಾಮಗಳೂ ಸೇರ್ಪಡೆಯಾಗಲಿ.
ಸುಬ್ರಾಯ ದೇವಾಡಿಗ ಅಧ್ಯಕ್ಷ ಬಿಜೆಪಿ ಭಟ್ಕಳ ತಾಲ್ಲೂಕು ಘಟಕ
‘ಪ್ರಸ್ತಾವಕ್ಕೆ ಸೂಚನೆ’
‘ಸ್ಥಳೀಯ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಜನಸಂಖ್ಯೆ ಪ್ರಮಾಣ ಭೌಗೋಳಿಕ ರಚನೆ ಪರಿಗಣಿಸಲಾಗುತ್ತದೆ. ಭಟ್ಕಳ ಮತ್ತು ಅದಕ್ಕೆ ಹೊಂದಿಕೊಂಡ ಕೆಲ ಸ್ಥಳೀಯ ಸಂಸ್ಥೆ ಸೇರಿಸಿ ಜನಸಂಖ್ಯೆ ಇನ್ನಿತರ ಮಾಹಿತಿ ನೀಡುವ ಬಗ್ಗೆ ಜಿಲ್ಲಾ ನಗರಾಭಿವೃದ್ಧಿಕೋಶಕ್ಕೆ ಸರ್ಕಾರದ ನಿರ್ದೇಶನ ಬಂದಿದೆ. ಅದನ್ನು ಆಧರಿಸಿ ನಗರಾಭಿವೃದ್ಧಿಕೋಶವು ಸ್ಥಳೀಯ ಸಂಸ್ಥೆಗೆ ಸೂಚನೆ ನೀಡಿರಬಹುದು. ಹಂತ ಹಂತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತದೆ. ನಂತರ ಭಟ್ಕಳ ಪುರಸಭೆಯನ್ನು ನಗರಸಭೆ ಮೇಲ್ದರ್ಜೆಗೇರಿಸಲು ಸೂಕ್ತ ಪ್ರಸ್ತಾವದೊಂದಿಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಕೆ ಆಗಲಿದೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.