ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕಾರವಾರ: ‘ವಸೂಲಿ ಕೇಂದ್ರ’ವಾದ ಬಸ್ ನಿಲ್ದಾಣದ ಮೂತ್ರಾಲಯ

Published : 15 ಜುಲೈ 2024, 6:42 IST
Last Updated : 15 ಜುಲೈ 2024, 6:42 IST
ಫಾಲೋ ಮಾಡಿ
Comments
ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಸಾರ್ವಜನಿಕ ಶೌಚಾಲಯ ದ್ವಿಚಕ್ರ ವಾಹನ ನಿಲುಗಡೆ ತಾಣವಾಗಿದೆ.
ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಸಾರ್ವಜನಿಕ ಶೌಚಾಲಯ ದ್ವಿಚಕ್ರ ವಾಹನ ನಿಲುಗಡೆ ತಾಣವಾಗಿದೆ.
ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯಲ್ಲಿರುವ ಶೌಚಾಲಯ ಸಾರ್ವಜನಿಕರಿಗೆ ತೀರ ಅಗತ್ಯವಿದ್ದು ಇದನ್ನು ಸದಾ ಸುಸ್ಥಿತಿಯಲ್ಲಿಡಬೇಕು.
ಹನುಮಂತಪ್ಪ ವಡ್ಡರ್ ತರಕಾರಿ ಮಾರಾಟಗಾರ
ಮುಂಡಗೋಡ ಬಸ್‌ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ಎರಡು ರೂಪಾಯಿ ತೆಗೆದುಕೊಳ್ಳುತ್ತಾರೆ. ಶೌಚಕ್ಕೆ ಹೋದರೆ ಹತ್ತು ರೂಪಾಯಿ ನೀಡಬೇಕು. ದುಡ್ಡು ಕೊಡುವ ವಿಚಾರಕ್ಕೆ ಪ್ರಯಾಣಿಕರು ಹಾಗೂ ಶೌಚಾಲಯ ನಿರ್ವಹಣೆಯ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ.
ಬಸವರಾಜ ಲಮಾಣಿ ಪ್ರಯಾಣಿಕ
ಬಸ್ ನಿಲ್ದಾಣದ ಮೂತ್ರಾಲಯಗಳಲ್ಲಿ ಜನರು ಶುಲ್ಕ ಪಾವತಿಸುವ ಅಗತ್ಯವಿಲ್ಲ. ಮೂತ್ರಾಲಯ ಬಳಕೆಗೆ ಶುಲ್ಕ ಪಡೆದ ಬಗ್ಗೆ ದೂರು ಬಂದರೆ ಪ್ರತಿ ದೂರಿಗೆ ಅಂತಹ ಗುತ್ತಿಗೆದಾರರಿಗೆ ₹500 ದಂಡ ವಿಧಿಸಲಾಗುತ್ತದೆ.
ಪ್ರವೀಣ ಶೇಟ್ ಸಾರಿಗೆ ಸಂಸ್ಥೆಯ ಅಧಿಕಾರಿ
ಜನ ದಟ್ಟಣೆ ಹೆಚ್ಚಿದಂತೆ ದುರ್ನಾತ
ಕುಮಟಾ ಪಟ್ಟಣ ಮುಖ್ಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಣೆಯನ್ನು ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಗುತ್ತಿಗೆ ಪಡೆದು ಅದನ್ನು ನಿರ್ವಹಿಸಲು ಬೇರೆಯವರಿಗೆ ಕೊಟ್ಟಿದ್ದಾರೆ. ‘ಬೆಳಗಿನ ಹೊತ್ತು ಮಾತ್ರ ಬಸ್ ನಿಲ್ದಾಣ ಶೌಚಾಲಯ ಸಾಧಾರಣ ಶುಚಿಯಾಗುತ್ತದೆ. ಜನ ದಟ್ಟಣೆ ಹೆಚ್ಚಿದಂತೆ ಶೌಚಾಲಯದಿಂದ ದುರ್ವಾಸನೆ ಬೀರುವುದು ಹೆಚ್ಚಾಗುತ್ತದೆ’ ಎಂದು ಪ್ರಯಾಣಿಕ ವಸಂತ ನಾಯ್ಕ ದೂರಿದರು. ‘ಬಸ್ ನಿಲ್ದಾಣದ ಶೌಚಾಲಯ ನಿರ್ವಹಿಸುವ ಗುತ್ತಿಗೆದಾರರು ಹಣ ಪಡೆದರೂ ಅದನ್ನು ಶುಚಿಯಾಗಿಡದಿರುವುದು ನಿಜವಾಗಿದೆ. ಗುತ್ತಿಗೆದಾರರಿಗೆ ಶುಚಿತ್ವ ಕಾಪಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಡೆಂಗಿ ಮುಂತಾದ ರೋಗ ಹರುಡವ ಸಾಧ್ಯತೆ ಇರುವುದರಿಂದ ಪ್ರತೀ ವಾರ ಅನಿರೀಕ್ಷಿತ ಭೇಟಿ ಶುಚಿತ್ವ ಪರೀಕ್ಷೆ ನಡೆಸುತ್ತೇನೆ’ ಎಂದು ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಎಂ.ಕುರ್ತಕೋಟಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT