<p><strong>ಕಾರವಾರ</strong>: ‘ವನವಾಸಿ ಸಂಸ್ಕೃತಿಯೇ ಭಾರತದ ನೆಲದ ಮೂಲ ಸಂಸ್ಕೃತಿ. ಸಂಸ್ಕಾರವನ್ನು ಉಳಿಸಿಕೊಂಡು ಬರುವ ಕೆಲಸವನ್ನು ಬುಡಕಟ್ಟು ಜನರು ಇಂದಿಗೂ ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದು ಭಾರತೀಯ ಸಾಹಿತ್ ಪರಿಷತ್ನ ಜಿಲ್ಲಾ ಘಟಕದ ಸಂಯೋಜಕ ಎಸ್.ಆರ್.ಎನ್.ಮೂರ್ತಿ ಹೇಳಿದರು.</p>.<p>ತಾಲ್ಲೂಕಿನ ನಗೆ ಗ್ರಾಮದ ಶಾರದಾ ವನವಾಸಿ ಕಲ್ಯಾಣ ಸಂಸ್ಕಾರ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಒಟ್ಟಾಗಿ ಕೃಷಿ ಮಾಡುವುದು, ಒಂದೆಡೆ ಸೇರಿ ಹಬ್ಬ ಹರಿದಿನಗಳ ಆಚರಣೆ ಮಾಡುವ ಕೆಲಸ ವನವಾಸಿ ಸಮುದಾಯಗಳಿಂದ ನಡೆಯುತ್ತವೆ. ಇವು ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದ್ದು ನಗರವಾಸಿಗಳು ಇದರಿಂದ ಪಾಠ ಕಲಿಯಬೇಕಾಗಿದೆ’ ಎಂದರು.</p>.<p>ಕೈಗಾದ ವನವಾಸಿ ಕಲ್ಯಾಣ ಸಮಿತಿಯ ಸದಸ್ಯರಾದ ವಿಜಯಲಕ್ಷ್ಮಿ ಬಂಡಿಕಟ್ಟಿ, ರಾಣಿ ರಾಮದಾಸ್, ಮಮತಾ ಶಿವಬಸವಯ್ಯ ಇದ್ದರು. ಸಂಸ್ಕಾರ ಕೇಂದ್ರದ ದೀಪಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ‘ವನವಾಸಿ ಸಂಸ್ಕೃತಿಯೇ ಭಾರತದ ನೆಲದ ಮೂಲ ಸಂಸ್ಕೃತಿ. ಸಂಸ್ಕಾರವನ್ನು ಉಳಿಸಿಕೊಂಡು ಬರುವ ಕೆಲಸವನ್ನು ಬುಡಕಟ್ಟು ಜನರು ಇಂದಿಗೂ ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದು ಭಾರತೀಯ ಸಾಹಿತ್ ಪರಿಷತ್ನ ಜಿಲ್ಲಾ ಘಟಕದ ಸಂಯೋಜಕ ಎಸ್.ಆರ್.ಎನ್.ಮೂರ್ತಿ ಹೇಳಿದರು.</p>.<p>ತಾಲ್ಲೂಕಿನ ನಗೆ ಗ್ರಾಮದ ಶಾರದಾ ವನವಾಸಿ ಕಲ್ಯಾಣ ಸಂಸ್ಕಾರ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಒಟ್ಟಾಗಿ ಕೃಷಿ ಮಾಡುವುದು, ಒಂದೆಡೆ ಸೇರಿ ಹಬ್ಬ ಹರಿದಿನಗಳ ಆಚರಣೆ ಮಾಡುವ ಕೆಲಸ ವನವಾಸಿ ಸಮುದಾಯಗಳಿಂದ ನಡೆಯುತ್ತವೆ. ಇವು ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದ್ದು ನಗರವಾಸಿಗಳು ಇದರಿಂದ ಪಾಠ ಕಲಿಯಬೇಕಾಗಿದೆ’ ಎಂದರು.</p>.<p>ಕೈಗಾದ ವನವಾಸಿ ಕಲ್ಯಾಣ ಸಮಿತಿಯ ಸದಸ್ಯರಾದ ವಿಜಯಲಕ್ಷ್ಮಿ ಬಂಡಿಕಟ್ಟಿ, ರಾಣಿ ರಾಮದಾಸ್, ಮಮತಾ ಶಿವಬಸವಯ್ಯ ಇದ್ದರು. ಸಂಸ್ಕಾರ ಕೇಂದ್ರದ ದೀಪಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>