ಪ್ರತಿ ವರ್ಷವೂ ರಂಜಾನ್ ಮಾರುಕಟ್ಟೆ ಪಟ್ಟಣದ ವಿಶೇಷ ಆಕರ್ಷಣೆಯ ಕೇಂದ್ರವಾಗುತ್ತದೆ. ನೆರೆಯ ತಾಲ್ಲೂಕುಗಳಾದ ಕುಂದಾಪುರ ಹಾಗೂ ಹೊನ್ನಾವರದ ಭಾಗದ ಜನರು ಇಲ್ಲಿಗೆ ಬಂದು ಖರೀದಿ ಮಾಡಿ ಹೋಗುತ್ತಾರೆ. ಇಲ್ಲಿ ಸಿಗುವ ಕಡಿಮೆ ಬೆಲೆಯ ವಸ್ತು ಹಾಗೂ ಬಟ್ಟೆಗಳಿಗೆ ಮುಸ್ಲಿಂ ಮಾತ್ರವಲ್ಲದೇ ಹಿಂದೂಗಳು ಮುಗಿಬಿದ್ದು ಖರೀದಿ ಮಾಡುತ್ತಾರೆ. ಈ ಬಾರಿ ಪೂರ್ಣ ಪ್ರಮಾಣದ ಅಂಗಡಿಗಳು ತೆರೆದುಕೊಳ್ಳದ ಕಾರಣ ಮಾರುಕಟ್ಟೆಗೆ ಆಗಮಿಸುವವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.