ಜಿಲ್ಲೆಯ ಹಲವೆಡೆ ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ.ಹಳಿಯಾಳ ತಾಲ್ಲೂಕಿನ ಖಾನಾಪುರ– ತಾಳಗುಪ್ಪ ರಾಜ್ಯ ಹೆದ್ದಾರಿಯ ದುಸಗಿ ಗ್ರಾಮದಲ್ಲಿ ಹಳ್ಳದ ನೀರು ಉಕ್ಕಿ ಹರಿದು ಸೇತುವೆ ಕೊಚ್ಚಿಹೋಗಿದೆ.ಹಳಿಯಾಳ– ಯಲ್ಲಾಪುರ– ದಾಂಡೇಲಿ ರಸ್ತೆಯ ಕೆಸರೊಳ್ಳಿ ಗ್ರಾಮದಲ್ಲಿ ರಸ್ತೆ ಸಂಪೂರ್ಣವಾಗಿ ನಾಶವಾಗಿದೆ. ಎಡೋಗ ಗ್ರಾಮದಲ್ಲಿಸೇತುವೆನೀರುಪಾಲಾಗಿದ್ದು, ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗಿದೆ.