ನದಿ ದಂಡೆಯ ಮೇಲೆ ಅರಬ್ಬರು ಬಟ್ಟೆ ಬರೆಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಿದ್ದರು. ಸನಿಹದಲ್ಲೇ ಹಾಸು ಕಲ್ಲುಗಳನ್ನು ಇಟ್ಟು ನಮಾಜು ಮಾಡಿದ್ದಾರೆ. ‘ಕಾಳು ಮೆಣಸಿನ ರಾಣಿ’ ಎಂದೇ ಹೆಸರಾಗಿದ್ದ, ಭಟ್ಕಳದ ಚೆನ್ನಪಟ್ಟಣ ಹನುಮಂತ ದೇವರಿಗೆ ಜಮೀನನ್ನು ಉಂಬಳಿಯಾಗಿ ನೀಡಿದ್ದವಳು ರಾಣಿ ಚೆನ್ನಭೈರಾದೇವಿ.ಇಂದಿನ ಹಾಡುವಳ್ಳಿಯನ್ನು (ಅಂದಿನ ಸಂಗೀತಪುರ) ಆಳಿದ್ದ ರಾಣಿ, ಇದೇ ಜಾಗದಲ್ಲಿ ಅರಬ್ಬರೊಂದಿಗೆ ಕಾಳು ಮೆಣಸನ್ನು ತಂದು ವ್ಯಾಪಾರ ಮಾಡಿದ್ದಳು.