<p>ಶಿರಸಿ: ತಾಲ್ಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಸೋಮವಾರ ರಾತ್ರಿ, ಮಂಗಳವಾರ ಇಡೀ ದಿನ ಉತ್ತಮ ಮಳೆಯಾಗಿದ್ದು, ಜಲಮೂಲಗಳು ಭರ್ತಿಯಾಗುತ್ತಿವೆ.</p>.<p>ವಾರದಿಂದೀಚೆ ಚುರುಕಾಗಿದ್ದ ಮಳೆ ಮಂಗಳವಾರ ಮತ್ತಷ್ಟು ಜೋರಾಗಿತ್ತು. ಇದರಿಂದ ಇಡೀ ದಿನ ಮಳೆ ಸುರಿಯಿತು. ಸೋಂದಾ, ಹುಲೇಕಲ್, ವಾನಳ್ಳಿ, ಸಾಲಕಣಿ ಭಾಗದಲ್ಲಿ ಮಳೆ ಸುರಿದ ಕಾರಣ ಕೃಷಿ ಚಟುವಟಿಕೆ ಜೋರಾಗಿ ನಡೆಯಿತು.</p>.<p>ಭತ್ತ ಬೆಳೆಗಾರರು ಸಂಭ್ರಮದಿಂದ ನಾಟಿ ಕಾರ್ಯ ನಡೆಸಿದರು. ಇನ್ನೂ ಕೆಲ ಭಾಗದಲ್ಲಿ ರಭಸದ ಗಾಳಿಯೂ ಮಳೆಗೆ ಸಾಥ್ ನೀಡಿದ್ದು, ಚಿಕ್ಕಪುಟ್ಟ ಹಾನಿ ಸಂಭವಿಸಿದೆ. ನಗರ ಸಮೀಪದ ಪಟ್ಟನಮನೆ ಗ್ರಾಮದ ಮಹಮ್ಮದ್ ಅಲಿ ಅವರ ಅಡುಗೆ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ₹ 30 ಸಾವಿರ ಹಾನಿ ಅಂದಾಜಿಸಲಾಗಿದೆ. ಕಂದಾಯ ಸಿಬ್ಬಂದಿ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. </p>.<p><strong>ಜೊಯಿಡಾ ವರದಿ</strong></p>.<p>ಜೊಯಿಡಾ: ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನದಿ ಹಳ್ಳಗಳು ತುಂಬಿ ಹರಿಯುತ್ತಿವೆ.</p>.<p>ತಾಲ್ಲೂಕಿನಲ್ಲಿ 48 ಗಂಟೆಗಳಲ್ಲಿ 83 ಮಿಮೀ., ಮಳೆಯಾಗಿದ್ದು, ಅಣಶಿ, ಕ್ಯಾಸಲ್ ರಾಕ್, ಉಳವಿ, ಗುಂದ ಹಾಗೂ ತೇರಾಳಿ ಭಾಗಗಳಲ್ಲಿ ಮಳೆಯಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ.</p>.<p>ತಾಲ್ಲೂಕಿನಲ್ಲಿ ಕುಡಿಯಲು ಹಾಗೂ ಕೃಷಿಗೆ ಝರಿಗಳೆ ನೀರಿನ ಮೂಲವಾಗಿದ್ದು ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ ಹರಿಯುತ್ತಿತ್ತು. ಆದರೆ ಈ ವರ್ಷ ಇನ್ನೂ ಝರಿಗಳು ಹರಿಯುತ್ತಿಲ್ಲ. ಹೀಗೆ ಗಾಳಿ ಸಹಿತ ಮಳೆ ಸುರಿದರೆ ಝರಿಗಳು ಹರಿಯಬಹುದು. ನೀರಿನ ಸಮಸ್ಯೆ ಪರಿಹಾರವಾಗಬಹುದು ಎನ್ನುತ್ತಾರೆ ಜೊಯಿಡಾದ ಹಿರಿಯ ಮಹಾದೇವ ಗಾವಡಾ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ತಾಲ್ಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಸೋಮವಾರ ರಾತ್ರಿ, ಮಂಗಳವಾರ ಇಡೀ ದಿನ ಉತ್ತಮ ಮಳೆಯಾಗಿದ್ದು, ಜಲಮೂಲಗಳು ಭರ್ತಿಯಾಗುತ್ತಿವೆ.</p>.<p>ವಾರದಿಂದೀಚೆ ಚುರುಕಾಗಿದ್ದ ಮಳೆ ಮಂಗಳವಾರ ಮತ್ತಷ್ಟು ಜೋರಾಗಿತ್ತು. ಇದರಿಂದ ಇಡೀ ದಿನ ಮಳೆ ಸುರಿಯಿತು. ಸೋಂದಾ, ಹುಲೇಕಲ್, ವಾನಳ್ಳಿ, ಸಾಲಕಣಿ ಭಾಗದಲ್ಲಿ ಮಳೆ ಸುರಿದ ಕಾರಣ ಕೃಷಿ ಚಟುವಟಿಕೆ ಜೋರಾಗಿ ನಡೆಯಿತು.</p>.<p>ಭತ್ತ ಬೆಳೆಗಾರರು ಸಂಭ್ರಮದಿಂದ ನಾಟಿ ಕಾರ್ಯ ನಡೆಸಿದರು. ಇನ್ನೂ ಕೆಲ ಭಾಗದಲ್ಲಿ ರಭಸದ ಗಾಳಿಯೂ ಮಳೆಗೆ ಸಾಥ್ ನೀಡಿದ್ದು, ಚಿಕ್ಕಪುಟ್ಟ ಹಾನಿ ಸಂಭವಿಸಿದೆ. ನಗರ ಸಮೀಪದ ಪಟ್ಟನಮನೆ ಗ್ರಾಮದ ಮಹಮ್ಮದ್ ಅಲಿ ಅವರ ಅಡುಗೆ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ₹ 30 ಸಾವಿರ ಹಾನಿ ಅಂದಾಜಿಸಲಾಗಿದೆ. ಕಂದಾಯ ಸಿಬ್ಬಂದಿ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. </p>.<p><strong>ಜೊಯಿಡಾ ವರದಿ</strong></p>.<p>ಜೊಯಿಡಾ: ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನದಿ ಹಳ್ಳಗಳು ತುಂಬಿ ಹರಿಯುತ್ತಿವೆ.</p>.<p>ತಾಲ್ಲೂಕಿನಲ್ಲಿ 48 ಗಂಟೆಗಳಲ್ಲಿ 83 ಮಿಮೀ., ಮಳೆಯಾಗಿದ್ದು, ಅಣಶಿ, ಕ್ಯಾಸಲ್ ರಾಕ್, ಉಳವಿ, ಗುಂದ ಹಾಗೂ ತೇರಾಳಿ ಭಾಗಗಳಲ್ಲಿ ಮಳೆಯಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ.</p>.<p>ತಾಲ್ಲೂಕಿನಲ್ಲಿ ಕುಡಿಯಲು ಹಾಗೂ ಕೃಷಿಗೆ ಝರಿಗಳೆ ನೀರಿನ ಮೂಲವಾಗಿದ್ದು ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ ಹರಿಯುತ್ತಿತ್ತು. ಆದರೆ ಈ ವರ್ಷ ಇನ್ನೂ ಝರಿಗಳು ಹರಿಯುತ್ತಿಲ್ಲ. ಹೀಗೆ ಗಾಳಿ ಸಹಿತ ಮಳೆ ಸುರಿದರೆ ಝರಿಗಳು ಹರಿಯಬಹುದು. ನೀರಿನ ಸಮಸ್ಯೆ ಪರಿಹಾರವಾಗಬಹುದು ಎನ್ನುತ್ತಾರೆ ಜೊಯಿಡಾದ ಹಿರಿಯ ಮಹಾದೇವ ಗಾವಡಾ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>