ಬಾಡ ಪ್ರೀಮಿಯರ್ ಕಾಲೇಜಿನ ಕಲಾ ಶಿಕ್ಷ ಗಣೇಶ ಬಾಡ್ಕರ್, ಮಣ್ಣಿನ ಮಾದರಿಗಳನ್ನು ಮಾಡುವ ವಿಧಾನವನ್ನುಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ವಿಜ್ಞಾನ ಕೇಂದ್ರದ ಸಿಬ್ಬಂದಿ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ವಿವಿಧ ಮಾದರಿಗಳನ್ನು ಶಿಬಿರಾರ್ಥಿಗಳಿಂದ ಮಾಡಿಸಿದರು. ಜಿಲ್ಲಾ ಪ್ರಯೋಗಾಲಯದ ಸಿಬ್ಬಂದಿ ಉಷಾ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕೆ ನೀಡಿದರು. ಕುಮಟಾದ ಜೀವವೈವಿಧ್ಯ ತಜ್ಞ ಓಂಕಾರ ಪೈ, ಪಕ್ಷಿ ವೀಕ್ಷಣೆ ಮಾಡುವ ತಂತ್ರಗಳು, ವಿಧಾನ, ಪಕ್ಷಿಗಳ ಮಹತ್ವ, ಗುಣಧರ್ಮವನ್ನು ತಿಳಿಸಿಕೊಟ್ಟರು.