<p><strong>ಗೋಕರ್ಣ:</strong> ಇಲ್ಲಿ ನೆಲೆಸಿರುವ ಪರಮೇಶ್ವರ ದೇವರು ಮತ್ತು ಬೆಸ್ತರ ಕನ್ಯೆ ಗಂಗೆಯ ವಿವಾಹ ನಿಶ್ಚಿತಾರ್ಥದ ಸಾಂಪ್ರದಾಯಿಕ ಕಾರ್ಯಕ್ರಮವು ನ.9ರಂದು ನೆರವೇರಲಿದೆ.</p>.<p>ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಾಲಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ 5.30ರಿಂದ 7 ಗಂಟೆಯ ಅವಧಿಯಲ್ಲಿ ಬರುವ ಗಂಗಾಷ್ಟಮಿಯ ಪರ್ವಕಾಲದಲ್ಲಿ ನಿಶ್ಚಿತಾರ್ಥವು ನಡೆಯಲಿದೆ. ಪುರೋಹಿತರು ಶಿವಗಂಗೆಯರ ಸಂವಾದವನ್ನು ಸಂಸ್ಕೃತ ಮತ್ತು ಕನ್ನಡದಲ್ಲಿ ಭಕ್ತರಿಗೆ ತಿಳಿಸಲಿದ್ದಾರೆ.</p>.<p>ನ.8ರಂದು ರಾತ್ರಿ ಸುಮಾರು 12 ಗಂಟೆಗೆ ಮಹಾಬಲೇಶ್ವರ ದೇವಾಲಯದಿಂದ, ದೇವರ ಉತ್ಸವದ ಮೆರವಣಿಗೆಯು ಗಂಗಾವಳಿಗೆ ಹೋಗಲಿದೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲೇ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವವು ಸಾಗುತ್ತದೆ. ಆ ಸಮಯದಲ್ಲಿ ಗಂಗೆಯ ಉದ್ಭವ ಆಗುವುದು ವಿಶೇಷವಾಗಿರುತ್ತದೆ. ಸೇರಿದ ಭಕ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥದ ತಾಂಬೂಲೋತ್ಸವವು ನೆರವೇರುತ್ತದೆ.</p>.<p>ಶಿವನ ಭಕ್ತರು, ಗಂಗಾಮಾತೆಯ ಕುಲಪುತ್ರರು, ಮೀನುಗಾರ ಸಮಾಜದವರು ಹಾಗೂ ಅಂಬಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಕೋವಿಡ್ 19 ಸಂಬಂಧ ಸರ್ಕಾರದ ನಿಯಮಾವಳಿಯಂತೆ ಈ ಉತ್ಸವವು ಸರಳವಾಗಿ, ಸೀಮಿತ ಜನರ ನಡುವೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ:</strong> ಇಲ್ಲಿ ನೆಲೆಸಿರುವ ಪರಮೇಶ್ವರ ದೇವರು ಮತ್ತು ಬೆಸ್ತರ ಕನ್ಯೆ ಗಂಗೆಯ ವಿವಾಹ ನಿಶ್ಚಿತಾರ್ಥದ ಸಾಂಪ್ರದಾಯಿಕ ಕಾರ್ಯಕ್ರಮವು ನ.9ರಂದು ನೆರವೇರಲಿದೆ.</p>.<p>ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಾಲಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ 5.30ರಿಂದ 7 ಗಂಟೆಯ ಅವಧಿಯಲ್ಲಿ ಬರುವ ಗಂಗಾಷ್ಟಮಿಯ ಪರ್ವಕಾಲದಲ್ಲಿ ನಿಶ್ಚಿತಾರ್ಥವು ನಡೆಯಲಿದೆ. ಪುರೋಹಿತರು ಶಿವಗಂಗೆಯರ ಸಂವಾದವನ್ನು ಸಂಸ್ಕೃತ ಮತ್ತು ಕನ್ನಡದಲ್ಲಿ ಭಕ್ತರಿಗೆ ತಿಳಿಸಲಿದ್ದಾರೆ.</p>.<p>ನ.8ರಂದು ರಾತ್ರಿ ಸುಮಾರು 12 ಗಂಟೆಗೆ ಮಹಾಬಲೇಶ್ವರ ದೇವಾಲಯದಿಂದ, ದೇವರ ಉತ್ಸವದ ಮೆರವಣಿಗೆಯು ಗಂಗಾವಳಿಗೆ ಹೋಗಲಿದೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲೇ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವವು ಸಾಗುತ್ತದೆ. ಆ ಸಮಯದಲ್ಲಿ ಗಂಗೆಯ ಉದ್ಭವ ಆಗುವುದು ವಿಶೇಷವಾಗಿರುತ್ತದೆ. ಸೇರಿದ ಭಕ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥದ ತಾಂಬೂಲೋತ್ಸವವು ನೆರವೇರುತ್ತದೆ.</p>.<p>ಶಿವನ ಭಕ್ತರು, ಗಂಗಾಮಾತೆಯ ಕುಲಪುತ್ರರು, ಮೀನುಗಾರ ಸಮಾಜದವರು ಹಾಗೂ ಅಂಬಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಕೋವಿಡ್ 19 ಸಂಬಂಧ ಸರ್ಕಾರದ ನಿಯಮಾವಳಿಯಂತೆ ಈ ಉತ್ಸವವು ಸರಳವಾಗಿ, ಸೀಮಿತ ಜನರ ನಡುವೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>