ರಾಣೆಬೆನ್ನೂರು: ತಾಲ್ಲೂಕಿನ ಇಟಗಿ ಮುಖ್ಯರಸ್ತೆಯ ತೆರೇದಹಳ್ಳಿ ಗ್ರಾಮದ ಬಳಿ ಮರಕ್ಕೆ ಕಾಡು ಡಿಕ್ಕಿಯಾಗಿ ಕಾರಿನಲ್ಲಿದ್ದ ಶಿರಸಿಯ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಶಿರಸಿಯ ಚಾಲಕ ವಿಠ್ಠಲ ಗಣೇಶ ದೈವಜ್ಞ (45) ಮತ್ತು ಜಯಂತಿ ದಿನೇಶ ಶೇಟ್ (50) ಮೃತರು. ಬೆಂಗಳೂರಿನಿಂದ ಶಿರಸಿಗೆ ಸಂಚರಿಸುವಾಗ ಅಪಘಾತ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.