<p><strong>ಅಂಕೋಲಾ: </strong>ತಾಲ್ಲೂಕಿನ ಅವರ್ಸಾದಲ್ಲಿ ಶನಿವಾರ ಮುಂಜಾನೆ ಮದುವೆ ಸಮಾರಂಭದ ಸಿದ್ಧತೆಯಲ್ಲಿದ್ದ ಮನೆಯೊಂದರ ಮೇಲೆ ಅಪರಿಚಿತನೊಬ್ಬ ಗುಂಡಿನ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್ ಗುಂಡು ಮನೆಯ ಗೋಡೆಗೆ ತಗುಲಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ.</p>.<p>ಸ್ಥಳದಲ್ಲಿ ಎರಡು ಗುಂಡುಗಳ ಅವಶೇಷಗಳು ಸಿಕ್ಕಿದ್ದು, ಅವುಗಳನ್ನು ಪೊಲೀಸರು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬಂದೂಕು ಅಥವಾ ಪಿಸ್ತೂಲಿನ ಮಾಹಿತಿ ತಿಳಿದುಬರಬೇಕಿದೆ.</p>.<p>ಅವರ್ಸಾ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ರಾಮನಗುಳಿಯ ಯುವತಿಯೊಬ್ಬರ ವಿವಾಹವು ಶನಿವಾರ ನಿಗದಿಯಾಗಿತ್ತು. ಅಲ್ಲಿಗೆ ತೆರಳಲು ಅವರು ಮತ್ತು ಕುಟುಂಬದವರು ಅವರ್ಸಾದ ತಮ್ಮ ಸಂಬಂಧಿಕರಾದ ರೂಪಾ ಸುನೀಲ್ ತಳೇಕರ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.</p>.<p>ಮದುವೆ ಸಮಾರಂಭದ ಅಂತಿಮ ಸಿದ್ಧತೆಯಲ್ಲಿದ್ದ ಮನೆಯ ಬಳಿ ಮುಂಜಾನೆ 4.10ಕ್ಕೆ ಏಕಾಏಕಿ ಗುಂಡಿನ ಶಬ್ದ ಕೇಳಿ ಮನೆ ಮಂದಿ ಬೆಚ್ಚಿಬಿದ್ದರು. ಯಾರನ್ನೋ ಗುರಿಯಾಗಿಟ್ಟು ಬಂದೂಕಿನಿಂದ ಸಿಡಿಸಿದ ಗುಂಡುಗಳು ಗೋಡೆಗೆ ತಗುಲಿದ್ದವು. ಹಾಗಾಗಿ ಭಾರಿ ಅಪಾಯವೊಂದು ತಪ್ಪಿತು.</p>.<p>ಯುವತಿಯ ಕುಟುಂಬಕ್ಕೆ ಯಾರೂ ಶತ್ರುಗಳಿಲ್ಲ. ಆದರೆ, ಕೆಲವು ದಿನಗಳಿಂದ ತಾಲ್ಲೂಕಿನ ವಜ್ರಳ್ಳಿಯ, ಅಪರಾಧ ಹಿನ್ನೆಲೆಯಿರುವ ವ್ಯಕ್ತಿಯೊಬ್ಬ ಆಕೆಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ಕಾರಣ ಆತನೇ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.</p>.<p>ಈ ಘಟನೆಯ ಕುರಿತು ವಧುವಿನ ಸಂಬಂಧಿ ಸಂದೀಪ ತಳೇಕರ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಕೋಲಾ ಠಾಣೆ ಇನ್ಸ್ಪೆಕ್ಟರ್ ಈ.ಸಿ.ಸಂಪತ್ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂಕೋಲಾ: </strong>ತಾಲ್ಲೂಕಿನ ಅವರ್ಸಾದಲ್ಲಿ ಶನಿವಾರ ಮುಂಜಾನೆ ಮದುವೆ ಸಮಾರಂಭದ ಸಿದ್ಧತೆಯಲ್ಲಿದ್ದ ಮನೆಯೊಂದರ ಮೇಲೆ ಅಪರಿಚಿತನೊಬ್ಬ ಗುಂಡಿನ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್ ಗುಂಡು ಮನೆಯ ಗೋಡೆಗೆ ತಗುಲಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ.</p>.<p>ಸ್ಥಳದಲ್ಲಿ ಎರಡು ಗುಂಡುಗಳ ಅವಶೇಷಗಳು ಸಿಕ್ಕಿದ್ದು, ಅವುಗಳನ್ನು ಪೊಲೀಸರು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬಂದೂಕು ಅಥವಾ ಪಿಸ್ತೂಲಿನ ಮಾಹಿತಿ ತಿಳಿದುಬರಬೇಕಿದೆ.</p>.<p>ಅವರ್ಸಾ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ರಾಮನಗುಳಿಯ ಯುವತಿಯೊಬ್ಬರ ವಿವಾಹವು ಶನಿವಾರ ನಿಗದಿಯಾಗಿತ್ತು. ಅಲ್ಲಿಗೆ ತೆರಳಲು ಅವರು ಮತ್ತು ಕುಟುಂಬದವರು ಅವರ್ಸಾದ ತಮ್ಮ ಸಂಬಂಧಿಕರಾದ ರೂಪಾ ಸುನೀಲ್ ತಳೇಕರ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.</p>.<p>ಮದುವೆ ಸಮಾರಂಭದ ಅಂತಿಮ ಸಿದ್ಧತೆಯಲ್ಲಿದ್ದ ಮನೆಯ ಬಳಿ ಮುಂಜಾನೆ 4.10ಕ್ಕೆ ಏಕಾಏಕಿ ಗುಂಡಿನ ಶಬ್ದ ಕೇಳಿ ಮನೆ ಮಂದಿ ಬೆಚ್ಚಿಬಿದ್ದರು. ಯಾರನ್ನೋ ಗುರಿಯಾಗಿಟ್ಟು ಬಂದೂಕಿನಿಂದ ಸಿಡಿಸಿದ ಗುಂಡುಗಳು ಗೋಡೆಗೆ ತಗುಲಿದ್ದವು. ಹಾಗಾಗಿ ಭಾರಿ ಅಪಾಯವೊಂದು ತಪ್ಪಿತು.</p>.<p>ಯುವತಿಯ ಕುಟುಂಬಕ್ಕೆ ಯಾರೂ ಶತ್ರುಗಳಿಲ್ಲ. ಆದರೆ, ಕೆಲವು ದಿನಗಳಿಂದ ತಾಲ್ಲೂಕಿನ ವಜ್ರಳ್ಳಿಯ, ಅಪರಾಧ ಹಿನ್ನೆಲೆಯಿರುವ ವ್ಯಕ್ತಿಯೊಬ್ಬ ಆಕೆಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ಕಾರಣ ಆತನೇ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.</p>.<p>ಈ ಘಟನೆಯ ಕುರಿತು ವಧುವಿನ ಸಂಬಂಧಿ ಸಂದೀಪ ತಳೇಕರ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಕೋಲಾ ಠಾಣೆ ಇನ್ಸ್ಪೆಕ್ಟರ್ ಈ.ಸಿ.ಸಂಪತ್ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>