ವಕೀಲ ಆರ್.ಜಿ. ನಾಯ್ಕ, ಹರೀಶ್ ಶೇಟ್, ಫ್ರಾನ್ಸಿಸ್ ಫರ್ನಾಂಡಿಸ್, ಗಜು ನಾಯ್ಕ,ಕೃಷ್ಣಾನಂದ ವೆರ್ಣೇಕರ್,ಮಂಜುನಾಥ ಮರಾಠಿ, ಕೆ.ಎನ್. ಮಂಜು, ಮೀರ್ ಸಾಬ್ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಬಿಸಿಲು ಲೆಕ್ಕಿಸದೆ ಅರೆಬೆತ್ತಲಾಗಿ ದೀವಗಿ ಗ್ರಾಮದಿಂದ ಸುಮಾರು ಆರು ಕಿ.ಮೀ. ದೂರದ ತಹಶೀಲ್ದಾರ್ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಗಮನ ಸೆಳೆದರು. ಸಿ.ಪಿ.ಐ ಪರಮೇಶ್ವರ ಗುನಗಾ, ಪಿ.ಎಸ್.ಐ ಗಳಾದ ಆನಂದಮೂರ್ತಿ, ರವಿ ಗುಡ್ಡಿ ಇದ್ದರು.