<p><strong>ಶಿರಸಿ: </strong>ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಭಕ್ತರು ನಾಗರ ಬನಕ್ಕೆ ತೆರಳಿ ಕಲ್ಲಿಗೆ ಹಾಲೆರೆದು, ಪೂಜಿಸಿದರು.</p>.<p>ನಗರದ ಸುಬ್ರಹ್ಮಣ್ಯ ದೇವಾಲಯಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿ ಹಣ್ಣು–ಕಾಯಿ ಅರ್ಪಿಸಿದರು. ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರು ಪ್ರತಿವರ್ಷದಂತೆ ಈ ವರ್ಷ ಸಹ ನಿಜ ನಾಗರಕ್ಕೆ ಪೂಜೆಸಿದರು. ಕಾಡಿನಿಂದ ಹಿಡಿದು ತಂದಿದ್ದ ನಾಗರಹಾವಿಗೆ ಹೂ ಹಾಕಿ, ಆರತಿ ಬೆಳಗಿದರು. ಅವರ ಜೊತೆಗೆ ಕುಟುಂಬದ ಸದಸ್ಯರು, ಪುಟಾಣಿ ಮಕ್ಕಳು ಸಹ ಹೆದರದೇ ನಿಜ ನಾಗರವನ್ನು ಭಕ್ತಿಯಿಂದ ನಮಿಸಿದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು.</p>.<p>‘ಹಾವು ಮನುಷ್ಯನ ಸ್ನೇಹಿತ ಇದ್ದಂತೆ. ಹಾವಿನಿಂದ ಮನುಷ್ಯನಿಗೆ ಅಪಾಯಕ್ಕಿಂತ ಅನುಕೂಲವೇ ಹೆಚ್ಚು. ಹಾವನ್ನು ಕಂಡರೆ ಸಾಯಿಸಬಾರದು. ಅದನ್ನು ಹಿಡಿಯುವ ತಜ್ಞರಿಗೆ ತಿಳಿಸಿ, ಸುರಕ್ಷಿತವಾಗಿ ಕಾಡಿಗೆ ಬಿಡಬೇಕು. ಹಾವಿನ ಸಂತತಿ ಕ್ಷೀಣಿಸುತ್ತಿರುವ ಕಾರಣ ಹಾವಿನ ಸಂರಕ್ಷಣೆಗೆ ಜನರು ಮುಂದಾಗಬೇಕು’ ಎಂದು ಪ್ರಶಾಂತ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಭಕ್ತರು ನಾಗರ ಬನಕ್ಕೆ ತೆರಳಿ ಕಲ್ಲಿಗೆ ಹಾಲೆರೆದು, ಪೂಜಿಸಿದರು.</p>.<p>ನಗರದ ಸುಬ್ರಹ್ಮಣ್ಯ ದೇವಾಲಯಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿ ಹಣ್ಣು–ಕಾಯಿ ಅರ್ಪಿಸಿದರು. ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರು ಪ್ರತಿವರ್ಷದಂತೆ ಈ ವರ್ಷ ಸಹ ನಿಜ ನಾಗರಕ್ಕೆ ಪೂಜೆಸಿದರು. ಕಾಡಿನಿಂದ ಹಿಡಿದು ತಂದಿದ್ದ ನಾಗರಹಾವಿಗೆ ಹೂ ಹಾಕಿ, ಆರತಿ ಬೆಳಗಿದರು. ಅವರ ಜೊತೆಗೆ ಕುಟುಂಬದ ಸದಸ್ಯರು, ಪುಟಾಣಿ ಮಕ್ಕಳು ಸಹ ಹೆದರದೇ ನಿಜ ನಾಗರವನ್ನು ಭಕ್ತಿಯಿಂದ ನಮಿಸಿದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು.</p>.<p>‘ಹಾವು ಮನುಷ್ಯನ ಸ್ನೇಹಿತ ಇದ್ದಂತೆ. ಹಾವಿನಿಂದ ಮನುಷ್ಯನಿಗೆ ಅಪಾಯಕ್ಕಿಂತ ಅನುಕೂಲವೇ ಹೆಚ್ಚು. ಹಾವನ್ನು ಕಂಡರೆ ಸಾಯಿಸಬಾರದು. ಅದನ್ನು ಹಿಡಿಯುವ ತಜ್ಞರಿಗೆ ತಿಳಿಸಿ, ಸುರಕ್ಷಿತವಾಗಿ ಕಾಡಿಗೆ ಬಿಡಬೇಕು. ಹಾವಿನ ಸಂತತಿ ಕ್ಷೀಣಿಸುತ್ತಿರುವ ಕಾರಣ ಹಾವಿನ ಸಂರಕ್ಷಣೆಗೆ ಜನರು ಮುಂದಾಗಬೇಕು’ ಎಂದು ಪ್ರಶಾಂತ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>