<p><strong>ಹೊನ್ನಾವರ (ಉತ್ತರ ಕನ್ನಡ):</strong> ಪ್ರಸಿದ್ಧ ಯಕ್ಷಗಾನ ಭಾಗವತ, ತಾಲ್ಲೂಕಿನ ಗುಣವಂತೆಯ ಕೃಷ್ಣ ಭಂಡಾರಿ (61) ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾದರು.</p>.<p>ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.</p>.<p>ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ ಮೊದಲಾದ ಮೇರು ಕಲಾವಿದರೊಂದಿಗೂ ಅವರು ರಂಗದಲ್ಲಿ ತಾಳದ ಸೂತ್ರ ಹಿಡಿದಿದ್ದರು. ಅವರ ವೃತ್ತಿ ಮೇಳ ಹಾಗೂ ಬಯಲಾಟ ಎರಡೂ ಕಡೆಗಳಲ್ಲಿ ಬೇಡಿಕೆಯ ಭಾಗವತರಾಗಿದ್ದರು.</p>.<p>ಹಾಡುಗಾರಿಕೆಯೊಂದಿಗೆ ಮದ್ದಲೆ ಹಾಗೂ ಚೆಂಡೆವಾದನಗಳನ್ನೂ ಬಲ್ಲವರಾಗಿದ್ದರು. ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ಮುಮ್ಮೇಳದ ಕಲಾವಿದರಾಗಿಯೂ ಅನುಭವ ಹೊಂದಿದ್ದರು. ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದ್ದ ಅವರು, ಕೆರೆಮನೆ ಮಹಾಬಲ ಹೆಗಡೆ ಅವರಿಂದ ಯಕ್ಷಗಾನದ ಹಲವು ಮಟ್ಟುಗಳನ್ನು ಕಲಿತಿದ್ದರು.</p>.<p>ಕೆರೆಮನೆ ಮೇಳದ ಭಾಗವತರಾಗಿ ಫ್ರಾನ್ಸ್, ಸ್ಪೇನ್ ಮೊದಲಾದ ಐರೋಪ್ಯ ರಾಷ್ಟ್ರಗಳ ತಿರುಗಾಟ ಕೈಗೊಂಡಿದ್ದರು. ಅವರ ಕಲಾಸೇವೆಯಿಂದ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳಿಗೂ ಭಾಜನರಾಗಿದ್ದರು.</p>.<p>ಅಂತ್ಯಕ್ರಿಯೆಯು ಗುಣವಂತೆಯಲ್ಲಿ ಭಾನುವಾರ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ (ಉತ್ತರ ಕನ್ನಡ):</strong> ಪ್ರಸಿದ್ಧ ಯಕ್ಷಗಾನ ಭಾಗವತ, ತಾಲ್ಲೂಕಿನ ಗುಣವಂತೆಯ ಕೃಷ್ಣ ಭಂಡಾರಿ (61) ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾದರು.</p>.<p>ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.</p>.<p>ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ ಮೊದಲಾದ ಮೇರು ಕಲಾವಿದರೊಂದಿಗೂ ಅವರು ರಂಗದಲ್ಲಿ ತಾಳದ ಸೂತ್ರ ಹಿಡಿದಿದ್ದರು. ಅವರ ವೃತ್ತಿ ಮೇಳ ಹಾಗೂ ಬಯಲಾಟ ಎರಡೂ ಕಡೆಗಳಲ್ಲಿ ಬೇಡಿಕೆಯ ಭಾಗವತರಾಗಿದ್ದರು.</p>.<p>ಹಾಡುಗಾರಿಕೆಯೊಂದಿಗೆ ಮದ್ದಲೆ ಹಾಗೂ ಚೆಂಡೆವಾದನಗಳನ್ನೂ ಬಲ್ಲವರಾಗಿದ್ದರು. ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ಮುಮ್ಮೇಳದ ಕಲಾವಿದರಾಗಿಯೂ ಅನುಭವ ಹೊಂದಿದ್ದರು. ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದ್ದ ಅವರು, ಕೆರೆಮನೆ ಮಹಾಬಲ ಹೆಗಡೆ ಅವರಿಂದ ಯಕ್ಷಗಾನದ ಹಲವು ಮಟ್ಟುಗಳನ್ನು ಕಲಿತಿದ್ದರು.</p>.<p>ಕೆರೆಮನೆ ಮೇಳದ ಭಾಗವತರಾಗಿ ಫ್ರಾನ್ಸ್, ಸ್ಪೇನ್ ಮೊದಲಾದ ಐರೋಪ್ಯ ರಾಷ್ಟ್ರಗಳ ತಿರುಗಾಟ ಕೈಗೊಂಡಿದ್ದರು. ಅವರ ಕಲಾಸೇವೆಯಿಂದ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳಿಗೂ ಭಾಜನರಾಗಿದ್ದರು.</p>.<p>ಅಂತ್ಯಕ್ರಿಯೆಯು ಗುಣವಂತೆಯಲ್ಲಿ ಭಾನುವಾರ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>