‘ಈ ಭಾಗದಲ್ಲಿ ಪೀರ್ ಮಸ್ಜಿದ್ ರಸ್ತೆ ಎನ್ನುವುದು ಯಾವುದೂ ಇಲ್ಲ. ಇದನ್ನು ನೋಡಿದರೆ ಮೇಲ್ನೋಟಕ್ಕೆ ಯಾರೊ ಬೇಕಂತಲೆ ಇದನ್ನು ಮಾಡಿರುವ ಅನುಮಾನ ಮೂಡುತ್ತಿದೆ. ಸ್ಥಳೀಯರಲ್ಲಿ ಗಲಭೆ ಎಬ್ಬಿಸಲು ಈ ಕುತಂತ್ರ ನಡೆಸಿರುವಂತೆ ಕಾಣುತ್ತಿದೆ. ಕೂಡಲೇ ಈ ಆದೇಶವನ್ನು ಹಿಂಪಡೆದು, ಸ್ಥಳೀಯರ ಒತ್ತಾಯದಂತೆ ರಸ್ತೆ ಅಭಿವೃದ್ಧಿ ಮಾಡಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಆದೇಶದಲ್ಲಿ ಆಗಿರುವ ತಪ್ಪನ್ನು ತಿದ್ದಿ ಹೊಸ ಆದೇಶ ನೀಡುವುದಾಗಿ ಅಧಿಕಾರಿಗಳು ಅವರಿಗೆ ಭರವಸೆ ನೀಡಿದರು. ಶ್ರೀರಾಮಸತಿ ದೇವಸ್ಥಾನ ಸಮಿತಿಯ ವಿಘ್ನೇಶ್ವರ ನಾಗೇಕರ್, ಶಾಂತಾ ನಾಗೇಕರ್, ರಾಜೇಂದ್ರ ನಾಗೇಕರ್, ಸಂತೋಷ ನಾಗೇಕರ್, ವಿರೋಭಾ ನಾಗೇಕರ್, ಉದ್ದೇಶ ನಾಗೇಕರ್ ಇದ್ದರು.