ಶಿವಮೊಗ್ಗದ ತಜ್ಞ ಡಾ.ವಿನಯ ಎಸ್. ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಚಿರತೆ ಪ್ರಜ್ಞೆ ತಪ್ಪುವಂತೆ ಮಾಡಿದರು. ನಂತರ ಅದನ್ನು ಹಿಡಿದು, ಬೆಂಗಳೂರಿನ ಬನ್ನೇರುಘಟ್ಟದ ಸಫಾರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು. ಎಸಿಎಫ್ ಅಜೀಜ್ ಅಹ್ಮದ್,ಆರ್ಎಫ್ಒ ಲೋಕೇಶ ಪಾಟಣಕರ್, ಉಪ ಅರಣ್ಯಾಧಿಕಾರಿ ಅಶೋಕ ಪೂಜಾರ, ಸಿಬ್ಬಂದಿ ಹನುಮಂತ ಕಿಲಾರಿ ಇದ್ದರು.