<p><strong>ಕಾರವಾರ:</strong> ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಇತ್ತೀಚೆಗೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ‘ಕರಾವಳಿ ಸಂಗಮೋತ್ಸವ’ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಗೋವಾ ನೃತ್ಯ ತಂಡ ಮೊದಲ ಬಹುಮಾನವಾಗಿ ₨1.50 ಲಕ್ಷ ಮೊತ್ತ ಪಡೆಯಿತು.<br /> <br /> 2ನೇ ಬಹುಮಾನ ₨ 1ಲಕ್ಷವನ್ನು ಮಂಗಳೂರು ತಂಡ ಹಾಗೂ 3ನೇ ಬಹುಮಾನ ₨50 ಸಾವಿರ ಮೊತ್ತವನ್ನು ಮಂಗಳೂರಿನ ಮತ್ತೊಂದು ತಂಡ ಪಡೆದುಕೊಂಡಿತು. ಭಟ್ಕಳ ಹಾಗೂ ಮುರ್ಡೇಶ್ವರ ನೃತ್ಯ ತಂಡಗಳು ಸಮಾಧಾನಕರ ಬಹುಮಾನವಾಗಿ ತಲಾ ₨25 ಸಾವಿರ ಪಡೆದುಕೊಂಡವು.<br /> <br /> ಸ್ಪರ್ಧೆಯಲ್ಲಿ ರಾಜಸ್ತಾನ್, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಿಂದ ಒಂದೊಂದು ನೃತ್ಯ ತಂಡ ಹಾಗೂ ಕರ್ನಾಟಕದಿಂದ 5 ತಂಡಗಳು ಭಾಗವಹಿಸಿದ್ದವು.<br /> <br /> ತೀರ್ಪುಗಾರರಾಗಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಕಮಲೇಶ್ ಮತ್ತು ಸೆಸಿಲ್, ನೃತ್ಯ ಸಂಯೋಜಕಿ ಜೆನ್ಯಾ ಮರೇನಿಚ್ ಭಾಗವಹಿಸಿದ್ದರು.<br /> <br /> <strong>ಉದ್ಘಾಟನೆ: </strong>ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯದರ್ಶಿ ನಿವೇದಿತ ಆಳ್ವ ಉದ್ಘಾಟಿಸಿದರು. ನಟ ವಿಜಯ ರಾಘವೇಂದ್ರ ಭಾಗವಹಿಸಿದ್ದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಇತ್ತೀಚೆಗೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ‘ಕರಾವಳಿ ಸಂಗಮೋತ್ಸವ’ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಗೋವಾ ನೃತ್ಯ ತಂಡ ಮೊದಲ ಬಹುಮಾನವಾಗಿ ₨1.50 ಲಕ್ಷ ಮೊತ್ತ ಪಡೆಯಿತು.<br /> <br /> 2ನೇ ಬಹುಮಾನ ₨ 1ಲಕ್ಷವನ್ನು ಮಂಗಳೂರು ತಂಡ ಹಾಗೂ 3ನೇ ಬಹುಮಾನ ₨50 ಸಾವಿರ ಮೊತ್ತವನ್ನು ಮಂಗಳೂರಿನ ಮತ್ತೊಂದು ತಂಡ ಪಡೆದುಕೊಂಡಿತು. ಭಟ್ಕಳ ಹಾಗೂ ಮುರ್ಡೇಶ್ವರ ನೃತ್ಯ ತಂಡಗಳು ಸಮಾಧಾನಕರ ಬಹುಮಾನವಾಗಿ ತಲಾ ₨25 ಸಾವಿರ ಪಡೆದುಕೊಂಡವು.<br /> <br /> ಸ್ಪರ್ಧೆಯಲ್ಲಿ ರಾಜಸ್ತಾನ್, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಿಂದ ಒಂದೊಂದು ನೃತ್ಯ ತಂಡ ಹಾಗೂ ಕರ್ನಾಟಕದಿಂದ 5 ತಂಡಗಳು ಭಾಗವಹಿಸಿದ್ದವು.<br /> <br /> ತೀರ್ಪುಗಾರರಾಗಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಕಮಲೇಶ್ ಮತ್ತು ಸೆಸಿಲ್, ನೃತ್ಯ ಸಂಯೋಜಕಿ ಜೆನ್ಯಾ ಮರೇನಿಚ್ ಭಾಗವಹಿಸಿದ್ದರು.<br /> <br /> <strong>ಉದ್ಘಾಟನೆ: </strong>ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯದರ್ಶಿ ನಿವೇದಿತ ಆಳ್ವ ಉದ್ಘಾಟಿಸಿದರು. ನಟ ವಿಜಯ ರಾಘವೇಂದ್ರ ಭಾಗವಹಿಸಿದ್ದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>