‘ಈ ಭಾಗದಲ್ಲಿ ಸುಮಾರು 75 ಎಕರೆ ಗದ್ದೆಯಿದೆ. ಬೇಸಿಗೆಯಲ್ಲಿ ನದಿಯಿಂದ ಉಪ್ಪು ನೀರು ಹರಿದು ಬರುತ್ತದೆ. ಮಳೆಗಾಲದಲ್ಲಿ ಅದು ಹರಿದುಹೋಗಲು ಚರಂಡಿ ವ್ಯವಸ್ಥೆ ಸರಿಯಿಲ್ಲ. ಹೀಗಾಗಿ ಆಸಕ್ತಿಯಿದ್ದರೂ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದಿಂದ ಈ ಸಮಸ್ಯೆಯಿದೆ’ ಎನ್ನುತ್ತಾರೆ ರೈತರಾದ ಪ್ರಿಯ ಬಿ.ಕೊಠಾರಕರ್, ಹರೀಶ್ಚಂದ್ರ ನಾಗೇಕರ್, ಸತೀಶ್ ಕೊಠಾರಕರ್.