ಪಾರಂಪರಿಕ ವೈದ್ಯ ಸಮಿತಿಯ ಸದಸ್ಯರಿಂದ ಸನ್ಮಾನ ಸ್ವೀಕರಿಸಿದ ಹಿರಿಯ ನಾಟಿವೈದ್ಯ ಹಳ್ಳದಗದ್ದೆಯ ಗಣಪತಿ ಅನಂತ ಹೆಗಡೆ ಮಾತನಾಡಿ, ವನಸ್ಪತಿ ಔಷಧದ ಬಗ್ಗೆ ಇಂದಿನ ಪೀಳಿಗೆಗೆ ಆಸಕ್ತಿ ಮತ್ತು ನಂಬಿಕೆ ಕಡಿಮೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಔಷಧಗಳು ವಿಪರೀತ ದುಬಾರಿಯಾಗಿದ್ದು ಜನಸಾಮಾನ್ಯರ ಕೈಗೆಟುಕುವುದಿಲ್ಲ ಎಂದರು. ನಿಸರ್ಗ ಆಸ್ಪತ್ರೆಯ ಡಾ.ವಿನಾಯಕ ಹೆಬ್ಬಾರ್ ಮಾತನಾಡಿ, ವೈದ್ಯಕೀಯ ಸಂಶೋಧನೆಗೋಸ್ಕರ ವಿಪರೀತ ಹಣ ವ್ಯಯಿಸಿದರೂ ಆರೋಗ್ಯ ಕಾಪಾಡಿಕೊಳ್ಳುವ ಆತಂಕ ನಿವಾರಣೆಯಾಗಿಲ್ಲ. ವನಸ್ಪತಿ ಔಷಧದ ಮೇಲಿರುವ ಕೀಳರಿಮೆ ತೊಲಗಬೇಕು. ಕಲಿಸುವವರಿಗೆ ಉತ್ಸುಕತೆಯಿದ್ದರೂ ಕಲಿಯುವವರು ಮುಂದೆ ಬರುತ್ತಿಲ್ಲ.