<p><strong>ಶಿರಸಿ: </strong>ಪ್ರಚೋದನಕಾರಿ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.</p>.<p><strong>ಹಿನ್ನೆಲೆ: </strong>ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದ ಸಂಸದರ ತಾಯಿಯನ್ನು ಇಲ್ಲಿನ ಟಿಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿತ್ತು. ವೈದ್ಯರು ಪರೀಕ್ಷಿಸಿ ಕಾಲು ಮುರಿದಿದೆ ಎಂದು ತಿಳಿಸಿ ಇನ್ನೊಂದು ರೋಗಿಯ ಶಸ್ತ್ರಚಿಕಿತ್ಸೆಗೆ ಹೋಗಿದ್ದರು ಎನ್ನಲಾಗಿದೆ.</p>.<p>ರಾತ್ರಿ ಸುಮಾರು ೧೧ಕ್ಕೆ ಆಸ್ಪತ್ರೆಗೆ ಬಂದ ಅನಂತಕುಮಾರ ಹೆಗಡೆ 'ಸಂಸದರ ತಾಯಿಯ ಚಿಕಿತ್ಸೆಗೇ ಸರಿಯಾಗಿ ಸ್ಪಂದಿಸದ ನೀವು ಜನಸಾಮಾನ್ಯರಿಗೆ ಇನ್ನೇನು ಮಾಡಬಲ್ಲಿರಿ' ಎಂದು ವೈದ್ಯರ ಮೇಲೆ ಹರಿಹಾಯ್ದರು. ನಂತರ ಮೂವರ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.</p>.<p>ಎಲುಬು ಕೀಲು ತಜ್ಞ ಡಾ.ಮಧುಕೇಶ್ವರ ಅವರ ತುಟಿಗೆ ಪೆಟ್ಟಾಗಿದೆ. ಡ್ಯೂಟಿ ಡಾಕ್ಟರ್ ಡಾ. ಬಾಲಚಂದ್ರ ಭಟ್ಟ ಮತ್ತು ಸ್ವಾಗತಕಾರ ರಾಹುಲ್ ಅವರಿಗೆ ಸಂಸದರು ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.</p>.<p>ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.</p>.<p>ನಗರದ ವೈದ್ಯರೆಲ್ಲ ಸೇರಿ ಮಧ್ಯರಾತ್ರಿ ದಿಢೀರ್ ಸಭೆ ನಡೆಸಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದರು.</p>.<p>ನಂತರದ ಬೆಳವಣಿಗೆಯಲ್ಲಿ ಟಿಎಸ್ಎಸ್ ಆಸ್ಪತ್ರೆ ಅಧ್ಯಕ್ಷ ಶಾಂತಾರಾಮ ಹೆಗಡೆ, ಎಲ್ಲ ವೈದ್ಯರು, ಸಂಸದರ ಉಪಸ್ಥಿತಿಯಲ್ಲಿ ರಾಜೀ ಸಂಧಾನ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ಪ್ರಚೋದನಕಾರಿ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.</p>.<p><strong>ಹಿನ್ನೆಲೆ: </strong>ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದ ಸಂಸದರ ತಾಯಿಯನ್ನು ಇಲ್ಲಿನ ಟಿಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿತ್ತು. ವೈದ್ಯರು ಪರೀಕ್ಷಿಸಿ ಕಾಲು ಮುರಿದಿದೆ ಎಂದು ತಿಳಿಸಿ ಇನ್ನೊಂದು ರೋಗಿಯ ಶಸ್ತ್ರಚಿಕಿತ್ಸೆಗೆ ಹೋಗಿದ್ದರು ಎನ್ನಲಾಗಿದೆ.</p>.<p>ರಾತ್ರಿ ಸುಮಾರು ೧೧ಕ್ಕೆ ಆಸ್ಪತ್ರೆಗೆ ಬಂದ ಅನಂತಕುಮಾರ ಹೆಗಡೆ 'ಸಂಸದರ ತಾಯಿಯ ಚಿಕಿತ್ಸೆಗೇ ಸರಿಯಾಗಿ ಸ್ಪಂದಿಸದ ನೀವು ಜನಸಾಮಾನ್ಯರಿಗೆ ಇನ್ನೇನು ಮಾಡಬಲ್ಲಿರಿ' ಎಂದು ವೈದ್ಯರ ಮೇಲೆ ಹರಿಹಾಯ್ದರು. ನಂತರ ಮೂವರ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.</p>.<p>ಎಲುಬು ಕೀಲು ತಜ್ಞ ಡಾ.ಮಧುಕೇಶ್ವರ ಅವರ ತುಟಿಗೆ ಪೆಟ್ಟಾಗಿದೆ. ಡ್ಯೂಟಿ ಡಾಕ್ಟರ್ ಡಾ. ಬಾಲಚಂದ್ರ ಭಟ್ಟ ಮತ್ತು ಸ್ವಾಗತಕಾರ ರಾಹುಲ್ ಅವರಿಗೆ ಸಂಸದರು ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.</p>.<p>ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.</p>.<p>ನಗರದ ವೈದ್ಯರೆಲ್ಲ ಸೇರಿ ಮಧ್ಯರಾತ್ರಿ ದಿಢೀರ್ ಸಭೆ ನಡೆಸಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದರು.</p>.<p>ನಂತರದ ಬೆಳವಣಿಗೆಯಲ್ಲಿ ಟಿಎಸ್ಎಸ್ ಆಸ್ಪತ್ರೆ ಅಧ್ಯಕ್ಷ ಶಾಂತಾರಾಮ ಹೆಗಡೆ, ಎಲ್ಲ ವೈದ್ಯರು, ಸಂಸದರ ಉಪಸ್ಥಿತಿಯಲ್ಲಿ ರಾಜೀ ಸಂಧಾನ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>