ರಂಗೋಲಿಯ ಚಿತ್ತಾರ: ನುರಿತ ಕಲಾವಿದರು ತಮ್ಮ ಕೈಚಳಕದಿಂದ ಅದ್ಭುತವಾದ ಹತ್ತಾರು ಚಿತ್ರವನ್ನು ಅರಳಿಸಿದ್ದರು. ಜಾನಪದ ಕಲಾವಿದೆ ಅಂಕೋಲೆಯ ಸುಕ್ರಿ ಬೊಮ್ಮು ಗೌಡ, ಹಿಂದಿ ಚಿತ್ರನಟ ದಿ. ಓಂಪುರಿ, ಎ.ಪಿ.ಜೆ ಅಬ್ದುಲ್ ಕಲಾಂ, ಶಿವಾಜಿ ಮಹಾರಾಜ, ಬಾಹುಬಲಿ ಚಿತ್ರದ ನಟ ಪ್ರಭಾಸ್ ಹೀಗೆ ನಾನಾ ವ್ಯಕ್ತಿ ಚಿತ್ರಗಳನ್ನು ಬಿಡಿಸಲಾಗಿತ್ತು. ಅಲ್ಲದೇ ಹೂವು, ಧಾನ್ಯಗಳಿಂದ ಅನೇಕ ಚಿತ್ರಗಳನ್ನು ರಚಿಸಲಾಗಿತ್ತು.