ತಂತಿ ಬೇಲಿಗೆ ಕಾಲು ಸಿಲುಕಿಕೊಂಡಿದ್ದರಿಂದ ಅದು ಮುಂದೆ ಸಾಗದೇ ಅಲ್ಲಿಯೇ ಮಲಗಿತ್ತು. ಇದನ್ನು ಕಂಡ ನೌಕಾನೆಲೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ವನ್ಯಜೀವಿ ರಕ್ಷಕರಾದ ಅಶೋಕ ನಾಯ್ಕ, ಮಹೇಶ್ ನಾಯ್ಕ ಹಾಗೂ ಪವನ್ ಅರಣ್ಯ ಸಿಬ್ಬಂದಿ ಜತೆಗೂಡಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅದರ ಕಣ್ಣಿಗೆ ಬಟ್ಟೆ ಕಟ್ಟಿ ಆನಂತರ ಅದನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿದರು.