<p><strong>ಯಲ್ಲಾಪುರ</strong>: ‘ಎಲ್ಲವನ್ನೂ ಲೆಕ್ಕಾಚಾರದಲ್ಲಿ ನೋಡುವ ಸರ್ಕಾರದಲ್ಲಿ ಪ್ರಶಸ್ತಿ ಸೇರಿದಂತೆ ಎಲ್ಲದಕ್ಕೂ ಅರ್ಜಿ ಹಾಕಿಕೊಳ್ಳಬೇಕಾದ ಅನಿವಾ ರ್ಯತೆ ಇರುವುದು ವಿಪರ್ಯಾಸ. ಸರ್ಕಾರ ನೀಡುವ ಇಂತಹ ಪ್ರಶಸ್ತಿಗಳಿಗಿಂತ ಜನ ನೀಡಿದ ಸನ್ಮಾನ ಬಹಳ ದೊಡ್ಡದು’ ಎಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.<br /> <br /> ಶಿರಸಿಯ ಮಿಯಾರ್ಡ್ಸ್ ಮೇದಿನಿ ರಂಗ ಅಧ್ಯಯನ ಕೇಂದ್ರ, ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಂಸ್ಥೆ, ಬೀಗಾರಿನ ನವೋದಯ ಯುವಕ ಸಂಘದ ಆಶ್ರಯದಲ್ಲಿ ವಜ್ರಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದ ‘ರಂಗಹಬ್ಬ 2014’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಇಂದಿನ ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಚಿತ್ರಗಳು ಬಿತ್ತರವಾಗುತ್ತಿರುವುದು ನಮ್ಮ ಸಂಸ್ಕೃತಿಗೆ ಕುತ್ತಾಗುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಆದರೆ ಗ್ರಾಮೀಣ ಭಾಗದ ಕಲಾ ರಾಯಭಾರಿಗಳು ಈ ಕೊರತೆಯನ್ನು ನೀಗಿಸುತ್ತಿದ್ದಾರೆ’ ಎಂದರು.<br /> <br /> ‘ಪ್ರಜಾವಾಣಿ’ ಸಂಪಾದಕ ಕೆ.ಎನ್. ಶಾಂತಕುಮಾರ್ ಮಾತನಾಡಿ, ‘ಗ್ರಾಮೀಣ ರಂಗ ಪ್ರತಿಭೆಗಳನ್ನು ಸನ್ಮಾನಿಸಿ, ಮಾಧ್ಯಮಗಳು ರಂಗಭೂಮಿಯನ್ನು ಜನರ ಬಳಿಗೆ ಕೊಂಡೊಯ್ಯಬೇಕು ಎನ್ನುವ ಅಭಿಲಾಷೆಯನ್ನು ಪ್ರಜಾವಾಣಿ ಈಡೇರಿಸುತ್ತಿದೆ’ ಎಂದರು.<br /> ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಮಾತನಾಡಿ, ‘ವಿಭಿನ್ನ ರಂಗಗಳಲ್ಲಿ ವಿಭಿನ್ನ ರೂಪಗಳಲ್ಲಿ ನಾಟಕಗಳನ್ನು ಅಭಿವ್ಯಕ್ತಿಗೊಳಿಸು ತ್ತಿರುವುದು ಕಲ್ಪನೆಗೂ ಮೀರಿದ್ದು’ ಎಂದರು.<br /> <br /> ಗಣೇಶ ಕಿರಿಗಾರೆ, ಎಂ.ದತ್ತಾತ್ರೆಯ, ಆರ್.ಟಿ ಭಟ್ಟ, ಎಸ್.ಎನ್.ಗಾಂವ್ಕರ್, ಎಂ.ಎನ್.ಭಟ್ಟ ವೇದಿಕೆಯಲ್ಲಿದ್ದರು. ಗೋಪಾಲ ಭಟ್ಟ ನಡಿಗೆಮನೆ ಅಧ್ಯಕ್ಷತೆ ವಹಿಸಿದ್ದರು.<br /> <br /> ನಾಟಕ ರಚನಾಕಾರ ಪ್ರಕಾಶ ಭಾಗವತ್ ತ್ಯಾರಗಲ್ ಹಾಗೂ ಗ್ರಾಮೀಣ ರಂಗ ಪ್ರತಿಭೆಗಳಾದ ಜಿ.ಲಕ್ಷ್ಮಿ, ಟಿ.ವಿ.ಕೋಮಾರ, ಸಾವೇರ ಫರ್ನಾಂಡಿಸ್, ಸತೀಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸತೀಶ ಹೆಗಡೆ ಮಾತನಾಡಿದರು.<br /> <br /> ಡಿ.ಶಂಖರ ಭಟ್ಟ ಸ್ವಾಗತಿಸಿದರು. ರಂಗ ನಿರ್ದೇಶಕ ಕೆ.ಆರ್.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಜಿ.ಭಟ್ಟ ನಿರೂಪಿಸಿದರು. ಜಿ.ಎಸ್.ಗಾಂವ್ಕರ್ ವಂದಿಸಿದರು.<br /> <br /> ರಂಗ ಹಬ್ಬದ ಅಂಗವಾಗಿ ಭಾನುವಾರ ವಜ್ರಳ್ಳಿಯಲ್ಲಿ ಕೆ.ಆರ್.ಪ್ರಕಾಶ ನಿರ್ದೇಶನದಲ್ಲಿ ‘ಒಂದು ಬಾವಿಯ ಕಥೆ’ ನಾಟಕ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ‘ಎಲ್ಲವನ್ನೂ ಲೆಕ್ಕಾಚಾರದಲ್ಲಿ ನೋಡುವ ಸರ್ಕಾರದಲ್ಲಿ ಪ್ರಶಸ್ತಿ ಸೇರಿದಂತೆ ಎಲ್ಲದಕ್ಕೂ ಅರ್ಜಿ ಹಾಕಿಕೊಳ್ಳಬೇಕಾದ ಅನಿವಾ ರ್ಯತೆ ಇರುವುದು ವಿಪರ್ಯಾಸ. ಸರ್ಕಾರ ನೀಡುವ ಇಂತಹ ಪ್ರಶಸ್ತಿಗಳಿಗಿಂತ ಜನ ನೀಡಿದ ಸನ್ಮಾನ ಬಹಳ ದೊಡ್ಡದು’ ಎಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.<br /> <br /> ಶಿರಸಿಯ ಮಿಯಾರ್ಡ್ಸ್ ಮೇದಿನಿ ರಂಗ ಅಧ್ಯಯನ ಕೇಂದ್ರ, ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಂಸ್ಥೆ, ಬೀಗಾರಿನ ನವೋದಯ ಯುವಕ ಸಂಘದ ಆಶ್ರಯದಲ್ಲಿ ವಜ್ರಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದ ‘ರಂಗಹಬ್ಬ 2014’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಇಂದಿನ ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಚಿತ್ರಗಳು ಬಿತ್ತರವಾಗುತ್ತಿರುವುದು ನಮ್ಮ ಸಂಸ್ಕೃತಿಗೆ ಕುತ್ತಾಗುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಆದರೆ ಗ್ರಾಮೀಣ ಭಾಗದ ಕಲಾ ರಾಯಭಾರಿಗಳು ಈ ಕೊರತೆಯನ್ನು ನೀಗಿಸುತ್ತಿದ್ದಾರೆ’ ಎಂದರು.<br /> <br /> ‘ಪ್ರಜಾವಾಣಿ’ ಸಂಪಾದಕ ಕೆ.ಎನ್. ಶಾಂತಕುಮಾರ್ ಮಾತನಾಡಿ, ‘ಗ್ರಾಮೀಣ ರಂಗ ಪ್ರತಿಭೆಗಳನ್ನು ಸನ್ಮಾನಿಸಿ, ಮಾಧ್ಯಮಗಳು ರಂಗಭೂಮಿಯನ್ನು ಜನರ ಬಳಿಗೆ ಕೊಂಡೊಯ್ಯಬೇಕು ಎನ್ನುವ ಅಭಿಲಾಷೆಯನ್ನು ಪ್ರಜಾವಾಣಿ ಈಡೇರಿಸುತ್ತಿದೆ’ ಎಂದರು.<br /> ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಮಾತನಾಡಿ, ‘ವಿಭಿನ್ನ ರಂಗಗಳಲ್ಲಿ ವಿಭಿನ್ನ ರೂಪಗಳಲ್ಲಿ ನಾಟಕಗಳನ್ನು ಅಭಿವ್ಯಕ್ತಿಗೊಳಿಸು ತ್ತಿರುವುದು ಕಲ್ಪನೆಗೂ ಮೀರಿದ್ದು’ ಎಂದರು.<br /> <br /> ಗಣೇಶ ಕಿರಿಗಾರೆ, ಎಂ.ದತ್ತಾತ್ರೆಯ, ಆರ್.ಟಿ ಭಟ್ಟ, ಎಸ್.ಎನ್.ಗಾಂವ್ಕರ್, ಎಂ.ಎನ್.ಭಟ್ಟ ವೇದಿಕೆಯಲ್ಲಿದ್ದರು. ಗೋಪಾಲ ಭಟ್ಟ ನಡಿಗೆಮನೆ ಅಧ್ಯಕ್ಷತೆ ವಹಿಸಿದ್ದರು.<br /> <br /> ನಾಟಕ ರಚನಾಕಾರ ಪ್ರಕಾಶ ಭಾಗವತ್ ತ್ಯಾರಗಲ್ ಹಾಗೂ ಗ್ರಾಮೀಣ ರಂಗ ಪ್ರತಿಭೆಗಳಾದ ಜಿ.ಲಕ್ಷ್ಮಿ, ಟಿ.ವಿ.ಕೋಮಾರ, ಸಾವೇರ ಫರ್ನಾಂಡಿಸ್, ಸತೀಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸತೀಶ ಹೆಗಡೆ ಮಾತನಾಡಿದರು.<br /> <br /> ಡಿ.ಶಂಖರ ಭಟ್ಟ ಸ್ವಾಗತಿಸಿದರು. ರಂಗ ನಿರ್ದೇಶಕ ಕೆ.ಆರ್.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಜಿ.ಭಟ್ಟ ನಿರೂಪಿಸಿದರು. ಜಿ.ಎಸ್.ಗಾಂವ್ಕರ್ ವಂದಿಸಿದರು.<br /> <br /> ರಂಗ ಹಬ್ಬದ ಅಂಗವಾಗಿ ಭಾನುವಾರ ವಜ್ರಳ್ಳಿಯಲ್ಲಿ ಕೆ.ಆರ್.ಪ್ರಕಾಶ ನಿರ್ದೇಶನದಲ್ಲಿ ‘ಒಂದು ಬಾವಿಯ ಕಥೆ’ ನಾಟಕ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>