<p><strong>ತೆಕ್ಕಲಕೋಟೆ:</strong> ಇಲ್ಲಿನ ತುಂಗಭದ್ರಾ ಕೆಳಮಟ್ಟದ (ಎಲ್ಎಲ್ಸಿ) ಕಾಲುವೆಯ ಬಾಗೇವಾಡಿ ಉಪಕಾಲುವೆ ಪಕ್ಕದಿಂದ ಭೈರಾಪುರ ಗ್ರಾಮದ ರೈತರು ಅನಧಿಕೃತವಾಗಿ ಪೈಪ್ ಲೈನ್ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಘಟನೆ ಮಂಗಳವಾರ ನಡೆದಿದೆ.</p>.<p>ಈ ಕುರಿತು ಮಾತನಾಡಿದ ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಬಂದೇ ನವಾಜ್, ‘ಕಾಲುವೆಯ ಪಕ್ಕದಲ್ಲಿ ಪೈಪ್ ಲೈನ್ ಹಾಕುವ ಮೂಲಕ ಕಾಲುವೆಯಿಂದ ಅನಧಿಕೃತವಾಗಿ ನೀರು ಪಡೆಯುವ ದುರುದ್ದೇಶ ಇದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದು ಹೇಳಿದರು.</p>.<p>ಬಾಗೇವಾಡಿ ಕಾಲುವೆ ಬಳಿಯಿಂದ ಗೋಸಬಾಳು ಗ್ರಾಮದವರೆಗೆ ಏತ ನೀರಾವರಿ ಯೋಜನೆ ಅಡಿಯಲ್ಲಿ ₹65 ಲಕ್ಷ ವೆಚ್ಚದ ಕಾಮಗಾರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಕಾಮಗಾರಿ ನಡೆಸುತ್ತಿರುವುದಾಗಿ ಭೈರಾಪುರ ಗ್ರಾಮದ ರೈತ ಬಸವನಗೌಡ ತಿಳಿಸಿದರು.</p>.<p>ಜೆಸಿಬಿ ಯಂತ್ರ ಹಾಗೂ ಪೈಪ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ರೈತ ಮುಖಂಡರಾದ ನೆಣಿಕೆಪ್ಪ, ಶಾಷಾವಲಿ, ನಾಗಪ್ಪ, ಬಿ. ಚಂದ್ರ ನಾಯಕ್, ಬಿ. ಶ್ರೀನಿವಾಸ, ಎಚ್. ರಾಜ, ಜಿ. ಸಿದ್ದಯ್ಯ, ಇಸೂಬ್ ಇದ್ದರು.</p>.<div><blockquote>ತೋಡು ಮಾಳ ಹಳ್ಳದಿಂದ ಗೋಸಬಾಳು ಗ್ರಾಮದವರೆಗೆ ಪೈಪ್ ಲೈನ್ ಹಾಕುವ ಕಾರ್ಯ ನಡೆಯುತ್ತಿದ್ದು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಪೊಲೀಸ್ ಇಲಾಖೆ ಸಹಕಾರದಿಂದ ಕಾಮಗಾರಿ ನಿಲ್ಲಿಸಲಾಗಿದೆ</blockquote><span class="attribution">ತಿಪ್ಪೇಸ್ವಾಮಿ ಸಿರುಗುಪ್ಪ ನೀರಾವರಿ ಇಲಾಖೆ ಎಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಇಲ್ಲಿನ ತುಂಗಭದ್ರಾ ಕೆಳಮಟ್ಟದ (ಎಲ್ಎಲ್ಸಿ) ಕಾಲುವೆಯ ಬಾಗೇವಾಡಿ ಉಪಕಾಲುವೆ ಪಕ್ಕದಿಂದ ಭೈರಾಪುರ ಗ್ರಾಮದ ರೈತರು ಅನಧಿಕೃತವಾಗಿ ಪೈಪ್ ಲೈನ್ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಘಟನೆ ಮಂಗಳವಾರ ನಡೆದಿದೆ.</p>.<p>ಈ ಕುರಿತು ಮಾತನಾಡಿದ ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಬಂದೇ ನವಾಜ್, ‘ಕಾಲುವೆಯ ಪಕ್ಕದಲ್ಲಿ ಪೈಪ್ ಲೈನ್ ಹಾಕುವ ಮೂಲಕ ಕಾಲುವೆಯಿಂದ ಅನಧಿಕೃತವಾಗಿ ನೀರು ಪಡೆಯುವ ದುರುದ್ದೇಶ ಇದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದು ಹೇಳಿದರು.</p>.<p>ಬಾಗೇವಾಡಿ ಕಾಲುವೆ ಬಳಿಯಿಂದ ಗೋಸಬಾಳು ಗ್ರಾಮದವರೆಗೆ ಏತ ನೀರಾವರಿ ಯೋಜನೆ ಅಡಿಯಲ್ಲಿ ₹65 ಲಕ್ಷ ವೆಚ್ಚದ ಕಾಮಗಾರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಕಾಮಗಾರಿ ನಡೆಸುತ್ತಿರುವುದಾಗಿ ಭೈರಾಪುರ ಗ್ರಾಮದ ರೈತ ಬಸವನಗೌಡ ತಿಳಿಸಿದರು.</p>.<p>ಜೆಸಿಬಿ ಯಂತ್ರ ಹಾಗೂ ಪೈಪ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ರೈತ ಮುಖಂಡರಾದ ನೆಣಿಕೆಪ್ಪ, ಶಾಷಾವಲಿ, ನಾಗಪ್ಪ, ಬಿ. ಚಂದ್ರ ನಾಯಕ್, ಬಿ. ಶ್ರೀನಿವಾಸ, ಎಚ್. ರಾಜ, ಜಿ. ಸಿದ್ದಯ್ಯ, ಇಸೂಬ್ ಇದ್ದರು.</p>.<div><blockquote>ತೋಡು ಮಾಳ ಹಳ್ಳದಿಂದ ಗೋಸಬಾಳು ಗ್ರಾಮದವರೆಗೆ ಪೈಪ್ ಲೈನ್ ಹಾಕುವ ಕಾರ್ಯ ನಡೆಯುತ್ತಿದ್ದು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಪೊಲೀಸ್ ಇಲಾಖೆ ಸಹಕಾರದಿಂದ ಕಾಮಗಾರಿ ನಿಲ್ಲಿಸಲಾಗಿದೆ</blockquote><span class="attribution">ತಿಪ್ಪೇಸ್ವಾಮಿ ಸಿರುಗುಪ್ಪ ನೀರಾವರಿ ಇಲಾಖೆ ಎಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>