ಕುಟುಂಬದಂತೆ ಇದ್ದೇವೆ: ‘ಆನಂದ್ ಸಿಂಗ್ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂಬ ಬಗ್ಗೆ ನನಗೂ ಮಾಹಿತಿ ಇಲ್ಲ. ಆದರೆ ಚುನಾವಣೆಯಲ್ಲಿ ಆಗಿರುವ ಸೋಲಿನಿಂದ ಅವರು ನೊಂದಿರುವುದಂತೂ ನಿಜ. ಆದರೆ ನಾವೆಲ್ಲ ಒಂದು ಕುಟುಂಬದಂತೆ ಇದ್ದೇವೆ. ಮುಂದೆ ಅಧ್ಯಕ್ಷರ ಚುನಾವಣೆ ಸಾಂಗವಾಗಿ ನೆರವೇರುವ ಆಶಯ ಇದೆ. ಬ್ಯಾಂಕ್ ಸದೃಢವಾಗಿದ್ದು, ಮುಂದೆಯೂ ಉತ್ತಮವಾಗಿ ಜನರಿಗೆ ಸೇವೆ ಸಲ್ಲಿಸಲಿದೆ’ ಎಂದು ಬ್ಯಾಂಕ್ನ ನಿರ್ದೇಶಕರಾಗಿರುವ ಎಲ್.ಎಸ್. ಆನಂದ್ ‘ಪ್ರಜಾವಾಣಿ‘ಗೆ ತಿಳಿಸಿದರು.